ಕಣಿವೆ, ಅ. ೧೦: ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ.ಮಂಥರ್‌ಗೌಡ ಅವರು ಕುಶಾಲನಗರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲೆ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯನ್ನು ಮಂಗಳವಾರ ಕರೆದಿದ್ದರು ಎನ್ನಲಾಗಿದ್ದು, ಬೆಳಿಗ್ಗೆ ೧೧.೩೦ ರಿಂದ ಸಂಜೆ ೪ ಗಂಟೆಯ ತನಕವೂ ಅಧಿಕಾರಿಗಳು ಶಾಸಕರ ಬರುವಿಕೆಗಾಗಿ ಕಾದು ಕಾದು ಬಸವಳಿದ ಘಟನೆ ಜರುಗಿತು.

ಪೂರ್ವಾಹ್ನ ೧೧.೩೦ ಕ್ಕೆ ಸಭೆ ನಿಗಧಿ ಪಡಿಸಿದ್ದರಿಂದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಬೆಳಗ್ಗೆಯೇ ಮುಳ್ಳುಸೋಗೆಯಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣಕ್ಕೆ ಆಗಮಿಸಿದ್ದರು.

ಆದರೆ ಸಮಯ ಮಧ್ಯಾಹ್ನ ೨ ಗಂಟೆಯಾದರೂ ಶಾಸಕರು ಬಾರದ ಕಾರಣ ಅಧಿಕಾರಿಗಳು ಊಟ ಮಾಡಲು ತೆರಳಿ ಮತ್ತೆ ಅಪರಾಹ್ನ ೩ ಗಂಟೆಗೆ ಸಭಾಂಗಣಕ್ಕೆ ಆಗಮಿಸಿದರಾದರೂ ಶಾಸಕರು ೪ ಗಂಟೆಗೆ ಸಭೆಗೆ ಆಗಮಿಸಿದರು.

ಬಳಿಕ ಅಧಿಕಾರಿಗಳ ಜೊತೆ ಕೆಲವು ಅಭಿವೃದ್ಧಿ ಕಾಮಗಾರಿಗಳ ಸಂಬAಧ ಸಭೆ ನಡೆಸಿದರು. ತಾಲೂಕು ಪಂಚಾಯಿತಿ ಇಒ ಜಯಣ್ಣ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.