ಮಡಿಕೇರಿ, ಅ. ೧೦: ಅನಾಥ, ನಿರ್ಗತಿಕರ ರಕ್ಷಕ, ಆಶ್ರಯದಾತರಾಗಿದ್ದ ರಮೇಶ್ ದಂಪತಿ ಸಾವಿನಲ್ಲಿಯೂ ಒಂದಾಗಿದ್ದಾರೆ. ಚಿಕಿತ್ಸೆ ಫಲಿಸದೆ ರಮೇಶ್ ಪತ್ನಿ ರೂಪ ವಿಧಿವಶರಾಗಿದ್ದಾರೆ. ತಾ. ೫ರಂದು ಮಡಿಕೇರಿಯ ಅಂಬೇಡ್ಕರ್ ಬಡಾವಣೆಯ ತಮ್ಮ ಮನೆಯಲ್ಲಿ ಗ್ಯಾಸ್ ರಿಪೇರಿ ಮಾಡುವ ಸಂದರ್ಭ ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ವಿಕಾಸ್ ಜನಸೇವಾ ಟ್ರಸ್ಟ್ ಸ್ಥಾಪಕ ರಮೇಶ್ ಹಾಗೂ ಅವರ ಪತ್ನಿ ರೂಪ, ತಂದೆ ಕರಿಯಪ್ಪ ಅವರಿಗೆ ಗಂಭೀರ ಗಾಯಗಳಾಗಿ ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತಾ. ೮ ರಂದು ರಮೇಶ್ ಸಾವನ್ನಪ್ಪಿದ್ದರು.

(ಮೊದಲ ಪುಟದಿಂದ) ಇದೀಗ ಚಿಕಿತ್ಸೆ ಫಲಿಸದೆ ರೂಪ ಇಹಲೋಕ ತ್ಯಜಿಸಿದ್ದಾರೆ.

ರಮೇಶ್ ಅವರ ಸಾಮಾಜಿಕ ಚಟುವಟಿಕೆಗೆ ಬೆಂಬಲ ನೀಡುತ್ತಿದ್ದ ರೂಪ ಆಶ್ರಮದ ಉಸ್ತುವಾರಿಯನ್ನು ನೋಡಿಕೊಳುತ್ತಾ ನಿಸ್ವಾರ್ಥವಾಗಿ ಶ್ರಮಿಸುತ್ತಿದ್ದರು. ಮೈಸೂರಿನಿಂದ ಮೃತದೇಹವನ್ನು ತಂದು ಅಂಬೇಡ್ಕರ್ ನಗರದ ನಿವಾಸದಲ್ಲಿ ಅಂತಿಮ ದರ್ಶನದ ಬಳಿಕ ಡೈರಿ ಫಾರಂ ಬಳಿಯ ರುದ್ರಭೂಮಿಯಲ್ಲಿ ಅಂತ್ಯಸAಸ್ಕಾರ ನೆರವೇರಿಸಲಾಯಿತು.