ಕಣಿವೆ, ಸೆ. ೨೪: ವಾಡಿಕೆಯ ಮಳೆ ಇಲ್ಲದೆ ಜೀವನದಿ ಕಾವೇರಿಯ ತವರು ನೆಲದಲ್ಲಿ ಜನರು ಪರಿತಪಿಸು ತ್ತಿರು ವಾಗ ಹಾರಂಗಿ ಜಲಾಶ ಯದ ಅಧಿಕಾರಿ ಗಳು ಜಲಾಶಯ ದಿಂದ ಸುಮಾರು ೫೦೦ ಕ್ಯೂಸೆಕ್ಸ್ ನೀರನ್ನು ವಾಮ ಮಾರ್ಗದಲ್ಲಿ ಹರಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಜಲಾಶಯದ ಕ್ರಸ್ಟ್ ಗೇಟುಗಳ ಮೂಲಕ ನೀರು ಹರಿಸಿದರೆ ಜನ ರೊಚ್ಚಿಗೇಳುವ ಭಯ ಹಾಗೂ ಆತಂಕದಿAದ ಜಲವಿದ್ಯುತ್ ಘಟಕದ ಕಾಲುವೆಯ ಮುಖೇನ ನದಿಗೆ ನೀರನ್ನು ಹರಿಸಲಾಗುತ್ತಿದೆ.

ಕಳೆದ ಕೆಲವು ದಿನಗಳಿಂದ ಹಾರಂಗಿ ನದಿಯಲ್ಲಿ ನೀರಿನ ಹರಿವು ಕ್ಷೀಣಿಸಿತ್ತು. ಇದೀಗ ನದಿಯಲ್ಲಿ ನೀರು ಸರಾಗವಾಗಿ ಹರಿದು ಹೋಗುತ್ತಿರುವ ಚಿತ್ರಣ ಗೋಚರಿಸುತ್ತಿದೆ.