ಚೆಯ್ಯAಡಾಣೆ, ಆ. ೨೧: ಮಡಿ ಕೇರಿಯಲ್ಲಿ ನಿವೃತ್ತ ಇಎಂಇ ಜಲಂದರ್ ಹಾಕಿ ಕ್ರೀಡಾಪಟುಗಳ ಸಂತೋಷ ಕೂಟ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತ ತಂಡವನ್ನು ಪ್ರತಿನಿಧಿಸಿದ್ದ ನಿವೃತ್ತ ಕೊಡಂದೇರ ಕುಶ ನಂಜಪ್ಪ ವಹಿಸಿದ್ದರು.

ಮುಖ್ಯ ಅತಿಥಿಯಾಗಿ ನಿವೃತ್ತ ಸೈನಿಕ ಪೋರೇರ ನಾಣಯ್ಯ ಆಗಮಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಆಟೋಟ ಸ್ವರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಚೋಳಂಡ ಡಾಲು ಮುದ್ದಯ್ಯ, ನೆಲ್ಲಮಕ್ಕಡ ಕಾರ್ಯಪ್ಪ, ಪುಗ್ಗೆರ ತಿಮ್ಮಯ್ಯ, ಕ್ಯಾಲೇಟಿರ ಸೋಮಣ್ಣ, ಮಾದಂಡ ರವಿ ಪೆಮ್ಮಯ್ಯ, ಚೈಯಂಡ ಲವ ಅಪ್ಪಚ್ಚು, ಬೊಳ್ತಾಜ್ಜಿರ ಅಶೋಕ್, ಮಾರ್ಚಂಡ ಪ್ರಭು, ಅರೆಯಡ ಚಿಣ್ಣಪ್ಪ, ಚಂದಪ್ಪAಡ ಆಕಾಶ್, ಅಲ್ಲಂಡ ವಾಸು ಮಾಚಯ್ಯ, ನೆರವಂಡ ಮದು ಪೂಣಚ್ಚ, ಚೇಮಿರ ಬೆಳ್ಯಪ್ಪ ಹಾಗೂ ಕುಟುಂಬದ ಸದಸ್ಯರು ಹಾಜರಿದ್ದರು.

ಪ್ರಾರ್ಥನೆಯನ್ನು ಚೈಯಂಡ ದೀಪಿಕಾ ಅಪ್ಪಚ್ಚು, ಸ್ವಾಗತವನ್ನು ಐತಿಚಂಡ ಕಾಶಿ ನಂಜಪ್ಪ ಹಾಗೂ ವಂದನೆಯನ್ನು ನೆಲ್ಲಮಕ್ಕಡ ಕಾರ್ಯಪ್ಪ ನಿರ್ವಹಿಸಿದರು.