ಭಾಗಮಂಡಲ, ಮೇ ೨೩: ಭಾಗಮಂಡಲ ವ್ಯಾಪ್ತಿಯಲ್ಲಿ ಸುರಿದ ಭಾರಿ ಗಾಳಿ ಮಳೆಗೆ ಅಲ್ಲಲ್ಲಿ ಹಾನಿ ಸಂಭವಿಸಿದೆ. ಸಮೀಪದ ತಣ್ಣಿಮಾನಿ ಗ್ರಾಮದ ಮಲ್ಲೇಶ್ ಎಂಬವರ ದನದ ಕೊಟ್ಟಿಗೆಯ ಮೇಲೆ ಮರ ಮುರಿದು ಬಿದ್ದ ಪರಿಣಾಮ ಕೊಟ್ಟಿಗೆಗೆ ಹಾನಿಯಾಗಿದ್ದು, ಕೊಟ್ಟಿಗೆ ಒಳಗಡೆ ಇದ್ದ ಒಂದು ಎತ್ತು ಮೃತಪಟ್ಟಿದೆ. ಮತ್ತೊಂದು ಎತ್ತಿನ ಕೈ ಮುರಿದಿದೆ.

ಸ್ಥಳಕ್ಕೆ ಭಾಗಮಂಡಲದ ಪಶು ವೈದ್ಯಾಧಿಕಾರಿ ಚೇತನ್ ತೆರಳಿದ್ದು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಹೈನುಗಾರಿಕೆ ನಡೆಸುತ್ತಿರುವ ಮಲ್ಲೇಶ್ ಅವರಿಗೆ ಅಂದಾಜು ೨೨ ಸಾವಿರ ರೂಪಾಯಿ ನಷ್ಟವಾಗಿದೆ.