ಮಡಿಕೇರಿ, ಮಾ. ೧೬: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಾ. ೧೮ ರಂದು ಕೊಡಗು ಜಿಲ್ಲೆಗೆ ಭೇಟಿ ನೀಡಿ ವಿವಿಧ ಇಲಾಖೆಯ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಗೆ ಒಂದೇ ವೇದಿಕೆಯಲ್ಲಿ ಚಾಲನೆ ನೀಡಲಿದ್ದಾರೆ.
ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದ ಬಳಿ ನಿರ್ಮಾಣವಾಗಿರುವ ಗಾಂಧಿ ಭವನ, ಗ್ರೇಟರ್ ರಾಜಾಸೀಟು ಉದ್ಯಾನವನ, ಕೊಡಗು ಜಿಲ್ಲಾ ತರಬೇತಿ ಸಂಸ್ಥೆ ನಿರ್ಮಾಣ ಕಾಮಗಾರಿ, ಕುಶಾಲನಗರ-ನೂತನ ಪಶು ಆಸ್ಪತ್ರೆ ಕಟ್ಟಡ, ಕುಶಾಲನಗರ-ಸುಂಟಿಕೊಪ್ಪ, ಮುತ್ತಪ್ಪ ಕಾಲೋನಿ ಅಂಗನವಾಡಿ ಕೇಂದ್ರ, ವೀರಾಜಪೇಟೆ ಈಚೂರು ಮುಗಟಗೇರಿ ಅಂಗನವಾಡಿ ಕೇಂದ್ರ, ವೀರಾಜಪೇಟೆ-ಗುಂಡಿಗೆರೆ ಅಂಗನವಾಡಿ ಕೇಂದ್ರ ಉದ್ಘಾಟನೆ ಮಾಡಲಿದ್ದಾರೆ.
ಸೋಮವಾರಪೇಟೆ- ರೈತ ಸಂಪರ್ಕ ಕೇಂದ್ರ, ಶನಿವಾರಸಂತೆ ಕಟ್ಟಡ, ಸೋಮವಾರಪೇಟೆ-ರೈತ ಸಂಪರ್ಕ ಕೇಂದ್ರ, ಸೋಮವಾರಪೇಟೆ ಕಸಬಾ ಕಟ್ಟಡ, ವೀರಾಜಪೇಟೆ- ಅಮ್ಮತ್ತಿ ರೈತ ಸಂಪರ್ಕ ಕೇಂದ್ರ, ಪೊನ್ನಂಪೇಟೆ-ಹುದಿಕೇರಿ ರೈತ ಸಂಪರ್ಕ ಕೇಂದ್ರ, ಪೊನ್ನಂಪೇಟೆ-ಶ್ರೀಮAಗಲ ರೈತ ಸಂಪರ್ಕ ಕೇಂದ್ರ, ಕುಶಾಲನಗರ-ಬಸವನಹಳ್ಳಿ ವಾಲ್ಮೀಕಿ ಆಶ್ರಮ ಶಾಲೆ ಹೆಚ್ಚುವರಿ ಕೊಠಡಿ ನಿರ್ಮಾಣ ಕಾಮಗಾರಿ, ಸೋಮವಾರಪೇಟೆ-ತಾಲೂಕು
(ಮೊದಲ ಪುಟದಿಂದ) ಕೇಂದ್ರದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣ, ಸೋಮವಾರಪೇಟೆ- ಕೊಡ್ಲಿಪೇಟೆಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭವನವನ್ನು ಲೋಕಾರ್ಪಣೆಗೊಳಿಸಲಿದ್ದಾರೆ.
ವೀರಾಜಪೇಟೆ ಪಟ್ಟಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನ ಕಾಮಗಾರಿ, ಸೋಮವಾರಪೇಟೆ-ಡಾ.ಬಿ.ಆರ್. ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ, ಸೋಮವಾರಪೇಟೆ- ಶಾಂತಳ್ಳಿ ಹೋಬಳಿ ಮಟ್ಟದ ಡಾ.ಬಿ.ಆರ್.ಅಂಬೇಡ್ಕರ್ ಭವನ ಕಟ್ಟಡ, ಕುಶಾಲನಗರ- ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ, ಸೋಮವಾರಪೇಟೆ- ಪ್ರ.ಮಂ. ಆದರ್ಶ ಗ್ರಾಮ ಯೋಜನೆ, ಊರುಗುತ್ತಿ ಗ್ರಾಮ, ಬ್ಯಾಡಗೊಟ್ಟ ಗ್ರಾ.ಪಂ., ನಿಲುವಾಗಿಲು ಗ್ರಾಮ, ನೀರುಗುಂದ ಗ್ರಾಮ ಬೆಸ್ಸೂರು ಗ್ರಾ.ಪಂ. ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ ಹಾಸ್ಟೆಲ್ ನಿರ್ಮಾಣ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ೪೫೦ ಹಾಸಿಗೆಯ ಸಾಮರ್ಥ್ಯದ ಭೋದಕ ಆಸ್ಪತ್ರೆ ಕಟ್ಟಡ ನಿರ್ಮಿಸುವ ಕಾಮಗಾರಿಯಲ್ಲಿ ೧೫೦ ಹಾಸಿಗೆ ಸಾಮರ್ಥ್ಯದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ಕಾಮಗಾರಿ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕಟ್ಟಡ ನಿರ್ಮಾಣ ಕಾಮಗಾರಿ, ಗೋಣಿಕೊಪ್ಪ-ಅಗ್ನಿಶಾಮಕ ಠಾಣೆ ನೂತನ ಕಟ್ಟಡ ಶಂಕುಸ್ಥಾಪನೆ, ಮಡಿಕೇರಿ- ಸ.ಹಿ.ಪ್ರಾ.ಶಾಲೆ, ಕೊಯನಾಡು, ಕುಶಾಲನಗರ- ಸ.ಹಿ.ಶಾಲೆ, ೭ನೇ ಹೊಸಕೋಟೆ, ಕುಶಾಲನಗರ-ಸರ್ಕಾರಿ ಎಂಜಿನಿಯರಿAಗ್ ಕಾಲೇಜಿನ ವಿದ್ಯಾರ್ಥಿ ನಿಲಯ, ಕುಶಾಲನಗರ-ಸರ್ಕಾರಿ ಎಂಜಿನಿಯರಿAಗ್ ಕಾಲೇಜಿನ ವಿದ್ಯಾರ್ಥಿ ನಿಲಯ, ವೀರಾಜಪೇಟೆ ಹಾಗೂ ಸೋಮವಾರಪೇಟೆ- ನೀರಿನ ಸಂಪರ್ಕವನ್ನು ಉದ್ಘಾಟಿಸಲಿದ್ದಾರೆ.
ಶಂಕುಸ್ಥಾಪನಾ ಕಾರ್ಯಕ್ರಮಗಳು: ನಗರದಲ್ಲಿ ಐಟಿಡಿಪಿ ಕಚೇರಿ ಜಿಲ್ಲಾ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ, ವಾಲ್ಮೀಕಿ ಆಶ್ರಮ ಶಾಲೆ, ಕರಿಕೆ ನೂತನ ಕಟ್ಟಡಕ್ಕೆ, ಪೊನ್ನಂಪೇಟೆ-ವಾಲ್ಮೀಕಿ ಆಶ್ರಮ ಶಾಲೆ, ನಾಗರಹೊಳೆ ನೂತನ ಕಟ್ಟಡಕ್ಕೆ, ಸೋಮವಾರಪೇಟೆ-ಯಡವನಾಡು ಆಶ್ರಮ ಶಾಲೆ ಹೆಚ್ಚುವರಿ ಕೊಠಡಿ ನಿರ್ಮಾಣ ಕಾಮಗಾರಿ, ಪೊನ್ನಂಪೇಟೆ-ಕೋತೂರು ಆಶ್ರಮ ಶಾಲೆ ಹೆಚ್ಚುವರಿ ಕೊಠಡಿ, ಮಡಿಕೇರಿ-ಕಟ್ಟಪಳ್ಳಿ ಆಶ್ರಮ ಶಾಲೆ ಹೆಚ್ಚುವರಿ ಕೊಠಡಿ, ಮೂಲನಿವಾಸಿ ಜೇನುಕುರುಬ ಜನಾಂಗದ ಅಭಿವೃದ್ಧಿ ಯೋಜನೆಯಡಿ ಹಾಡಿಗಳಿಗೆ ಮೂಲಭೂತ ಸೌಕರ್ಯ ಒದಗಿಸುವ ಕಾಮಗಾರಿ ಮಡಿಕೇರಿ- ನಾಪೋಕ್ಲು ಸರ್ಕಾರಿ ಪದವಿ ಪೂರ್ವ ಕಾಲೇಜು, ವೀರಾಜಪೇಟೆ- ಅಮ್ಮತ್ತಿ ಹೋಬಳಿ ಡಾ.ಬಿ.ಆರ್. ಅಂಬೇಡ್ಕರ್ ಭವನ, ವೀರಾಜಪೇಟೆ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ, ಪೊನ್ನಂಪೇಟೆ-ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ, ಪೊನ್ನಂಪೇಟೆ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ, ನಾಪೋಕ್ಲು ಹೋಬಳಿ ನೂರಂಬಡ ಮಠದ ಬಳಿ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭವನ, ಕೊ.ವೈ.ವಿ.ಸಂ. ಆವರಣದಲ್ಲಿ ರೋಗಿಗಳ ಸಹಾಯಕರುಗಳಿಗೆ ವಿಶ್ರಾಂತಿ ಶಾಲೆ, ಕೊ.ವೈ.ವಿ.ಸಂ. ೫೦ ಹಾಸಿಗೆ ಸಾಮರ್ಥ್ಯದ ‘ಕ್ರಿಟಿಕಲ್ ಕೇರ್ ಯೂನಿಟ್’ ಆಸ್ಪತ್ರೆ ಕಟ್ಟಡ ನಿರ್ಮಿಸುವ ಕಾಮಗಾರಿ, ಕರ್ಣಂಗೇರಿ ಗ್ರಾಮದಲ್ಲಿ ಸಮಗ್ರ ಕೃಷಿ ಪದ್ಧತಿಯಡಿ ಕೃಷಿ ಕೇಂದ್ರ ನಿರ್ಮಾಣ, ಗೋಣಿಕೊಪ್ಪ-ಬಸ್ ನಿಲ್ದಾಣ ಹೀಗೆ ವಿವಿಧ ಇಲಾಖೆಗಳ ಯೋಜನೆಗೆ ಮುಖ್ಯಮಂತ್ರಿ ಅವರು ಚಾಲನೆ ನೀಡಲಿದ್ದಾರೆ.