ಸಿದ್ದಾಪುರ, ಸೆ. ೪: ಕುಶಾಲನಗರ ವಲಯದ ವ್ಯಾಪ್ತಿಯಲ್ಲಿ ಬರುವ ಕೆದಕಲ್, ಹೊರೂರು, ಮೋದೂರು, ಅಭ್ಯಾಲ, ಭೂತಾನಕಾಡು, ಕಂಬಿಬಾಣೆ, ಅತ್ತೂರು ನಲ್ಲೂರು, ಪೊನ್ನತ್‌ಮೊಟ್ಟೆ, ಕಾಫೀ ಬೋರ್ಡ್ ಭಾಗಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಮರಳಿ ಸಿದ್ದಾಪುರ, ಸೆ. ೪: ಕುಶಾಲನಗರ ವಲಯದ ವ್ಯಾಪ್ತಿಯಲ್ಲಿ ಬರುವ ಕೆದಕಲ್, ಹೊರೂರು, ಮೋದೂರು, ಅಭ್ಯಾಲ, ಭೂತಾನಕಾಡು, ಕಂಬಿಬಾಣೆ, ಅತ್ತೂರು ನಲ್ಲೂರು, ಪೊನ್ನತ್‌ಮೊಟ್ಟೆ, ಕಾಫೀ ಬೋರ್ಡ್ ಭಾಗಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಮರಳಿ ಕಾಡಿಗೆ ಅಟ್ಟುವ ಕಾರ್ಯಾಚರಣೆಯನ್ನು ತಾ. ೬ ರಂದು ಬೆಳಿಗ್ಗೆ ೮ ರಿಂದ ಸಂಜೆ ೬ ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ. ಆದ್ದುದರಿಂದ ಕಾಫಿ ತೋಟದ ಮಾಲೀಕರು, ಕಾರ್ಮಿಕರು, ವಾಹನ ಸವಾರರು ಎಚ್ಚರಿಕೆಯಿಂದ ಇದ್ದು ಇಲಾಖೆಯೊಂದಿಗೆ ಸಹಕರಿಸುವಂತೆ ವಲಯಾಧಿಕಾರಿ ಶಿವರಾಂ ಕೋರಿದ್ದಾರೆ.