ವೀರಾಜಪೇಟೆ, ಸೆ. ೪: ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ ಘಟನೆ ವೀರಾಜಪೇಟೆ ಹೊರವಲಯ ಬಿಟ್ಟಂಗಾಲ ಮುಖ್ಯ ರಸ್ತೆಯಲ್ಲಿ ನಡೆದಿದೆ.

ವೀರಾಜಪೇಟೆ ಅಮ್ಮತ್ತಿ ನಿವಾಸಿಗಳು ದ್ವಿಚಕ್ರ ಸವಾರರಾದ ಸುರೇಶ್ (೨೯) ಮತ್ತು ರಮೇಶ್ (೨೫) ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ವೀರಾಜಪೇಟೆ ನಗರದಿಂದ ಗೊಣಿಕೊಪ್ಪಕ್ಕೆ ತೆರಳುವ ಮಾರ್ಗ ಮಧ್ಯೆಯ ಬಿಟ್ಟಂಗಾಲ ಬಳಿ ಬೆಂಗಳೂರಿನಿAದ ಕೇರಳ ರಾಜ್ಯದ ಪಯ್ಯನೂರುವಿಗೆ ತೆರುಳುತಿದ್ದ ವಿನತ್ ಎಂಬವರ ಕಾರ್‌ನ ನಡುವೆ ಅಪಘಾತ ಸಂಭವಿಸಿದೆ. ದ್ವಿಚಕ್ರ ವಾಹನ ಸವಾರರು ವೀರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.