ವೀರಾಜಪೇಟೆ, ಜೂ. ೨೩: ಬಿಟ್ಟಂಗಾಲ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ವತಿಯಿಂದ ೪೦ ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನÀ ಗೋದಾಮು ಹಾಗೂ ಹತ್ಯಾರು ಮಳಿಗೆಯನ್ನು ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಉದ್ಘಾಟಿಸಿದರು.

ಉದ್ಘಾಟನಾ ಸಂದರ್ಭ ಬಿಟ್ಟಂಗಾಲ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚೆಂದ್ರಿಮಾಡ ಗಣೇಶ್ ನಂಜಪ್ಪ, ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕ ಹೆಚ್.ಎನ್. ರಮೇಶ್, ನಬಾರ್ಡ್ ವ್ಯವಸ್ಥಾಪಕ ಬಿ.ವಿ. ರಮೇಶ್, ಸಹಕಾರ ಸಂಘಗಳ ಸಹಾಯಕ ನಿರ್ಧೇಶಕ ಎಂ.ಈ. ಮೋಹನ್, ಆಡಳಿತ ಮಂಡಳಿ ಸದಸ್ಯರು, ನಿರ್ದೇಶಕರು, ಸದಸ್ಯರುಗಳು ಉಪಸ್ಥಿತರಿದ್ದರು. ಇದೇ ಸಂದರ್ಭ ಹಿರಿಯ ಸಹಕಾರಿ ಚೆಂದ್ರಿಮಾಡ ಪೂಣಚ್ಚ ಅವರುಗಳನ್ನು ಸನ್ಮಾನಿಸಲಾಯಿತು.