ಕುಶಾಲನಗರ, ಜೂ. ೨೩: ಜಿಲ್ಲೆಯ ಯುವತಿ ಸೇರಿದಂತೆ ರಾಜ್ಯದ ಇಬ್ಬರು ಸ್ಕೇಟಿಂಗ್ ಕ್ರೀಡಾ ಪಟುಗಳು ಅಂತರರಾಷ್ಟಿçÃಯ ರೋಲರ್ ಸ್ಕೇಟಿಂಗ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆೆ.

ಕುಶಾಲನಗರದ ಕಲ್ಪನಾ ಕುಟ್ಟಪ್ಪ ಅವರು ಪಂಜಾಬ್ ಮತ್ತು ವಿಶಾಖಪಟ್ಟಣದಲ್ಲಿ ನಡೆದ ಸ್ಪರ್ಧೆಯಲ್ಲಿ ಅರ್ಹತೆ ಪಡೆದುಕೊಂಡು ಅಕ್ಟೋಬರ್ ತಿಂಗಳಲ್ಲಿ ಅರ್ಜೆಂಟೈನಾ ದೇಶದಲ್ಲಿ ನಡೆಯುವ ಅಂತರರಾಷ್ಟಿçÃಯ ಸ್ಕೇಟಿಂಗ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಕರ್ನಾಟಕ ರಾಜ್ಯದಿಂದ ಕಲ್ಪನಾ ಸೇರಿದಂತೆ ಸುವರ್ಣಿಕ, ರಾಧಾಕೃಷ್ಣ ಅವರುಗಳು ಜೂನಿಯರ್ ವಿಭಾಗದಲ್ಲಿ ಪಾಲ್ಗೊಳ್ಳಲಿದ್ದಾರೆ.

ಜಿಲ್ಲೆಯ ಕಲ್ಪನಾ ಕುಟ್ಟಪ್ಪ ಮೈಸೂರಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ಕುಶಾಲನಗರದ ತಾತಂಡ ಸ್ವಾತಿ ಅವರ ಪುತ್ರಿಯಾಗಿದ್ದಾರೆ.

- ಚಂದ್ರಮೋಹನ್