ಕಣಿವೆ, ಜ. ೨೬: ಕುಶಾಲನಗರದ ಬೈಚನಹಳ್ಳಿಯ ಮಾರಮ್ಮ ದೇವಸ್ಥಾನದ ಬಳಿ ಇರುವ ಕಾವೇರಿ ಹೊಳೆಗೆ ತೆರಳುವ ರಸ್ತೆಯಲ್ಲಿ ಜಲಮಂಡಳಿಯವರು ಪಟ್ಟಣದ ನಿವಾಸಿಗಳಿಗೆ ಪೂರೈಸಲೆಂದು ಅಳವಡಿಸಿರುವ ಕುಡಿಯುವ ನೀರಿನ ಪೈಪ್‌ಲೈನ್ ದುರಸ್ತಿಯಾಗಿದ್ದು ಕುಡಿಯುವ ನೀರು ವೃಥಾ ಪೋಲಾಗುತ್ತಿದೆ.

ಬೆಳಿಗ್ಗೆ-ರಾತ್ರಿ ಎನ್ನದೇ ಹರಿಯುವ ಈ ನೀರಿನಿಂದ ರಸ್ತೆ ಹಾಳಾಗುತ್ತಿದೆ. ಈಗಾಗಲೇ ಹಾಳಾಗಿದೆ.

ಆದ್ದರಿಂದ ಜಲಮಂಡಳಿಯವರು ಕೂಡಲೇ ದುರಸ್ತಿಗೀಡಾಗಿರುವ ಈ ಪೈಪನ್ನು ಸರಿಪಡಿಸಿ ಪೋಲಾಗುತ್ತಿರುವ ನೀರನ್ನು ತಡೆಯಬೇಕೆಂದು ನಿವಾಸಿಗಳು ಆಗ್ರಹಿಸಿದ್ದಾರೆ. (ಕೆ.ಎಸ್. ಮೂರ್ತಿ)