ಸೋಮವಾರಪೇಟೆ, ಜ. ೪: ಬಡ ರೋಗಿಗಳ ಪಾಲಿಗೆ ಸಂಜೀವಿನಿ ಯಾಗಿದ್ದ ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಡಯಾಲಿಸಿಸ್ ಘಟಕ, ಇತ್ತೀಚಿನ ಕೆಲ ತಿಂಗಳುಗಳಿAದ ನಿರ್ವಹಣೆ ಇಲ್ಲದೇ ಸೊರಗಿರುವ ಪರಿಣಾಮ ಬಡ ರೋಗಿಗಳು ತ್ರಿಶಂಕು ಸ್ಥಿತಿಯಲ್ಲಿ ನರಳುವಂತಾಗಿದೆ. ಆಡಳಿತಗಾರರು ಮಾತ್ರ ದಿವ್ಯ ಮೌನಕ್ಕೆ ಶರಣಾಗಿದ್ದಾರೆ.
ಈ ಬಗ್ಗೆ ಆರೋಗ್ಯ ಇಲಾಖೆ, ಶಾಸಕರೂ ಸೇರಿದಂತೆ ಆರೋಗ್ಯ ರಕ್ಷಾ ಸಮಿತಿಯ ಗಮನ ಸೆಳೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ರೋಗಿಗಳು ಹಿಡಿಶಾಪ ಹಾಕುತ್ತಿದ್ದು, ಡಯಾಲಿಸಿಸ್ ಘಟಕವನ್ನು ಸುಸಜ್ಜಿತಗೊಳಿಸಿ, ನಾವುಗಳು ಇರುವಷ್ಟು ದಿನವಾದರೂ ಚಿಕಿತ್ಸೆ ಕೊಡಿ ಎಂದು ಮನವಿ ಮಾಡುತ್ತಿದ್ದಾರೆ.
ಕಳೆದ ೪ ವರ್ಷಗಳ ಹಿಂದೆ ಕಾರ್ಯಾರಂಭ ಮಾಡಿ ರೋಗಿಗಳಿಗೆ ಸೇವೆ ಒದಗಿಸುತ್ತಿದ್ದ ಡಯಾಲಿಸಿಸ್ ಘಟಕ ಸದ್ಯಕ್ಕೆ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದು, ಶಾಸಕರೂ ಸೇರಿದಂತೆ ಆರೋಗ್ಯ ಇಲಾಖೆ ಇತ್ತ ತುರ್ತು ಗಮನ ಹರಿಸಬೇಕಿದೆ.
ಡಯಾಲಿಸಿಸ್ ಘಟಕದಲ್ಲಿ ಪ್ರಸ್ತುತ ೨ ಘಟಕಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಇದೂ ಸಹ ಆಗಾಗ್ಗೆ ಕೈಕೊಡುತ್ತಿರುವುದರಿಂದ ರೋಗಿಗಳು ಜೀವನ್ಮರಣದ ಸ್ಥಿತಿಯಲ್ಲಿ ಘಟಕಕ್ಕೆ ಕಾಲಿಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈಗ ಇರುವ ೨ ಡಯಾಲಿಸಿಸ್ ಘಟಕದಲ್ಲಿ ಆಗಾಗ್ಗೆ ತಾಂತ್ರಿಕ ಸಮಸ್ಯೆ ಉಂಟಾಗುತ್ತಿದ್ದು, ರೋಗಿಗಳು ಜೀವ ಭಯದಿಂದಲೇ ಚಿಕಿತ್ಸೆಗೆ ಒಳಪಡು ವಂತಾಗಿದೆ. ಘಟಕದಲ್ಲಿ ನಿರ್ವಹಣೆಯ ಕೊರತೆಯೂ ಕಂಡುಬರುತ್ತಿದ್ದು, ಇದರೊಂದಿಗೆ ತಾಂತ್ರಿಕ ದೋಷಗಳು ಎದುರಾಗುತ್ತಿರುವ ಹಿನ್ನೆಲೆ ದಿನದಿಂದ ದಿನಕ್ಕೆ ಸಮಸ್ಯೆ ಉಲ್ಬಣವಾಗುತ್ತಲೇ ಇದೆ. ಕಳೆದ ೪ ತಿಂಗಳವರೆಗೂ ಉತ್ತಮವಾಗಿ ನಡೆಯುತ್ತಿದ್ದ ಡಯಾಲಿಸಿಸ್ ಘಟಕ, ನಂತರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಈ ಬಗ್ಗೆ ವರದಿಗಳು ಪ್ರಕಟವಾದ ಬೆನ್ನಲ್ಲೇ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಘಟಕದ ಸಮಸ್ಯೆಗಳತ್ತ ಗಮನಹರಿಸಿ, ಎರಡು ಯಂತ್ರಗಳನ್ನು ದುರಸ್ತಿಗೊಳಿಸುವಲ್ಲಿ ಶ್ರಮವಹಿಸಿದ್ದರು. ಇದೀಗ ಆ ಯಂತ್ರಗಳಲ್ಲೂ ತಾಂತ್ರಿಕ ದೋಷ ಕಂಡುಬರುತ್ತಿದ್ದು, ಹೊಸ ಘಟಕಗಳ ಅಳವಡಿಕೆಗೆ ಕ್ರಮವಹಿಸಲೇಬೇಕಿದೆ.
ಸೋಮವಾರಪೇಟೆಯ ಡಯಾಲಿಸಿಸ್ ಘಟಕದಲ್ಲಿ ವಾರದಲ್ಲಿ ೨೨ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ಬಡ ರೋಗಿಗಳ ಪಾಲಿಗೆ ಸಂಜೀವಿನಿ ಯಾಗಿತ್ತು. ಇದೀಗ ತಾಂತ್ರಿಕ ಸಮಸ್ಯೆಗೆ ಒಳಗಾಗಿರುವುದರಿಂದ ರೋಗಿಗಳ ಸಂಖ್ಯೆ ೬ಕ್ಕೆ ಇಳಿಕೆಯಾಗಿದ್ದು, ಉಳಿದವರು ಜೀವ ಉಳಿಸಿಕೊಳ್ಳಲು ಮಡಿಕೇರಿ, ಹಾಸನ, ಮೈಸೂರಿಗೆ ತೆರಳುವಂತಹ ಪರಿಸ್ಥಿತಿ ನಿರ್ಮಾಣ ವಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಡಯಾಲಿಸಿಸ್ ನಡೆದರೆ, ಖಾಸಗಿ ಆಸ್ಪತ್ರೆಗಳಲ್ಲಿ ಇದಕ್ಕೆ ಸಾವಿರಾರು ರೂಪಾಯಿ ವ್ಯಯಿಸ ಬೇಕಿದೆ. ಇದರಿಂದಾಗಿ ಬಡ ರೋಗಿಗಳು ಹೆಚ್ಚಿನ ಸಮಸ್ಯೆಗೆ ಸಿಲುಕುವಂತಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ವಾರದಲ್ಲಿ ೨ ಬಾರಿ ಡಯಾಲಿಸಿಸ್ಗೆ ಒಳಪಡುವ ರೋಗಿಗಳು ೪೮೦೦ ರೂಪಾಯಿ ನೀಡಬೇಕಿದೆ. ವಾರಕ್ಕೊಮ್ಮೆ ಇಷ್ಟು ದೊಡ್ಡಮೊತ್ತವನ್ನು ಭರಿಸಲು ಬಡ ರೋಗಿಗಳಿಗೆ ಸಾಧ್ಯವೇ? ಎಂದು ರೋಗಿಗಳು ಪ್ರಶ್ನಿಸುತ್ತಿದ್ದಾರೆ.
ಸೋಮವಾರಪೇಟೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನಕ್ಕೆ ಒಳಪಟ್ಟಿದೆ. ಕಳೆದ ೪ ವರ್ಷಗಳ ಹಿಂದೆ ಬಿ.ಆರ್.ಎಸ್. ಸಂಸ್ಥೆಯವರು ಡಯಾಲಿಸೀಸ್ ಘಟಕವನ್ನು ವಾರ್ಷಿಕ ನಿರ್ವಹಣೆಗೆ ಗುತ್ತಿಗೆ ಆಧಾರದ ಮೇಲೆ ಪಡೆದಿದ್ದು, ಅದರ ಅವಧಿ ಮುಕ್ತಾಯಗೊಂಡಿರುವುದರಿAದ ಕಂಪೆನಿಯವರು ಯಾರೂ ಇತ್ತ ತಲೆಹಾಕಿಲ್ಲ. ಆಸ್ಪತ್ರೆಯಲ್ಲಿದ್ದ ಯಂತ್ರೋಪಕರಣಗಳಿAದ ರೋಗಿಗಳಿಗೆ ಡಯಾಲಿಸಿಸ್ ಮಾಡಲಾಗುತ್ತಿತ್ತು. ಇದೀಗ ಅವುಗಳೂ ಸಹ ಶಿಥಿಲಾವಸ್ಥೆಗೆ ತಲುಪಿರುವು ದರಿಂದ, ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳ ನರಕಯಾತನೆ ಹೇಳತೀರದ್ದಾಗಿದೆ. ತಕ್ಷಣ ಶಾಸಕರು ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ರೋಗಿಗಳಿಗೆ ಅನುಕೂಲ ಕಲ್ಪಿಸಬೇಕಿದೆ.
ಈ ಬಗ್ಗೆ ‘ಶಕ್ತಿ’ಯೊಂದಿಗೆ ಪತ್ರಿಕ್ರಿಯೆ ನೀಡಿರುವ ಜಿಲ್ಲಾ ಆರೋಗ್ಯಾಧಿಕಾರಿ ಡಾ. ವೆಂಕಟೇಶ್, ‘ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ನಾಲ್ಕು ಡಯಾಲಿಸಿಸ್ ಘಟಕ ಸ್ಥಾಪಿಸಲು ಅಗತ್ಯ ಕ್ರಮ ವಹಿಸಲಾಗಿದೆ. ಕಳೆದ ಬಾರಿ ಟೆಂಡರ್ ಆಹ್ವಾನಿಸಿದ್ದು, ಇದರಲ್ಲಿ ಈರ್ವರು ಭಾಗವಹಿಸಿದ್ದರು. ನಂತರದ ದಿನಗಳಲ್ಲಿ ಓರ್ವ ಟೆಂಡರ್ದಾರರು ಕೆಲವೊಂದು ತಾಂತ್ರಿಕ ಕಾರಣಗಳನ್ನು ಮುಂದಿಷ್ಟು ಆಕ್ಷೇಪಣೆ ಸಲ್ಲಿಸಿದ್ದರಿಂದ ಮತ್ತೆ ಮರು ಟೆಂಡರ್ ಕರೆಯುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.
‘ತಾ. ೧.೧.೨೦೨೨ ರಂದು ಮರು ಟೆಂಡರ್ ಕರೆಯಲಾಗಿದ್ದು, ಮುಂದಿನ ೧೦ ದಿನಗಳವರೆಗೆ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಅವಧಿ ಪೂರ್ಣ ಗೊಂಡ ತಕ್ಷಣವೇ ನಾಲ್ಕು ಡಯಾಲಿಸಿಸ್ ಘಟಕ ಸ್ಥಾಪಿಸ ಲಾಗುವುದು. ಟೆಂಡರ್ನಲ್ಲಿ ಅರ್ಹ ಕಂಪೆನಿಗಳೇ ಭಾಗಿಯಾಗಬೇಕಿದೆ. ನೇರವಾಗಿ ಘಟಕ ಸ್ಥಾಪನೆ ಮಾಡಲು ಸಾಧ್ಯವಿಲ್ಲ. ಈ ಹಿನ್ನೆಲೆ ಒಂದಿಷ್ಟು ವಿಳಂಬವಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ತಕ್ಷಣ ಘಟಕ ಸ್ಥಾಪಿಸಿ ರೋಗಿಗಳ ಸೇವೆಗೆ ಮುಕ್ತ ಗೊಳಿಸಲಾಗುವುದು’ ಎಂದು ಭರವಸೆ ನೀಡಿದ್ದಾರೆ.
- ವಿಜಯ್ ಹಾನಗಲ್