ಮಡಿಕೇರಿ, ನ. ೨೮: ಮಡಿಕೇರಿ ಕೊಡವ ಸಮಾಜ ಕಲ್ಚರಲ್ ಮತ್ತು ಸೋಷಿಯಲ್ ವೆಲ್ಫೇರ್ ಸೆಂಟರ್ನ ನೂತನ ಸಾಲಿನ ಅಧ್ಯಕ್ಷರಾಗಿ ಮೂವೆರ ಶಂಭು ಸುಬ್ಬಯ್ಯ ಅವರು ಪುನರಾಯ್ಕೆಯಾಗಿದ್ದಾರೆ.
ಸಂಸ್ಥೆಯ ಆಡಳಿತ ಮಂಡಳಿ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಉಪಾಧ್ಯಕ್ಷರಾಗಿ ಮುಳ್ಳಂಡ ರತ್ತು ಚಂಗಪ್ಪ, ಕಾರ್ಯದರ್ಶಿಯಾಗಿ ಬಿದ್ದಂಡ ಬೆನ್ ಬೆಳ್ಳಿಯಪ್ಪ ಹಾಗೂ ಖಜಾಂಚಿಯಾಗಿ ಪಡೇಟ್ಟಿರ ಹರೀಶ್ ಮುತ್ತಪ್ಪ ಅವರು ನೇಮಕಗೊಂಡರು.
ಸAಸ್ಥೆಯ ನಿರ್ದೇಶಕರುಗಳಾಗಿ ಬಲ್ಯಂಡ ಪ್ರಕಾಶ್, ಬಲ್ಯಾಟಂಡ ಪಾರ್ಥ ಚಂಗಪ್ಪ, ಮುಂಡAಡ ಸೋಮಣ್ಣ, ಬೊಪ್ಪಂಡ ಶ್ಯಾಮ್ ಪೂಣಚ್ಚ, ನಾಳಿಯಂಡ ಅಯ್ಯಪ್ಪ, ಕೋಡಿರ ಅರುಣ್ ಅಪ್ಪಣ್ಣ, ಮುಕ್ಕಾಟಿರ ರಾಫಿ ಮೇದಯ್ಯ, ಕೊಂಗೇಟಿರ ದರ್ಶನ್ ನಾಣಯ್ಯ, ಕೆಚ್ಚೆಟ್ಟೀರ ರ್ಯಾಲಿ ಬಿದ್ದಪ್ಪ, ಬೊಳ್ಳಚೆಟ್ಟೀರ ವಿನು ಕಾವೇರಪ್ಪ, ಕಾಯಪಂಡ ಶಶಿ ಸೋಮಯ್ಯ ಅವರುಗಳು ಆಯ್ಕೆಯಾಗಿದ್ದಾರೆ. ನಿರ್ಗಮಿತ ಕಾರ್ಯದರ್ಶಿ ಚೆರ್ಮಂದAಡ ಮಣಿ ಪೊನ್ನಪ್ಪ ಅವರು ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿ ಮಾತನಾಡಿದರು.