ಮಡಿಕೇರಿ, ನ. ೨೫: ಮಡಿಕೇರಿ ತಾಲೂಕಿನಲ್ಲಿ ೨೦೨೧-೨೨ನೇ ಸಾಲಿನಲ್ಲಿ ಪ್ರಕೃತಿ ವಿಕೋಪದ ಅಕಾಲಿಕ ಮಳೆಯಿಂದಾಗಿ ಬೆಳೆ ಹಾನಿಯಾಗಿರುವ ಪ್ರದೇಶದ ಬಗ್ಗೆ ಕಾಫಿ ಮಂಡಳಿ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆಯಿಂದ ಜಂಟಿ ಸರ್ವೆ ಕಾರ್ಯವನ್ನು ನಡೆಸಲಾಗಿದೆ.

ಮಡಿಕೇರಿ ತಾಲೂಕಿನ ಬೆಳೆ ನಷ್ಟ ಶೇ. ೩೩ಕ್ಕಿಂತ ಹೆಚ್ಚು ಹಾನಿಯಾಗಿರುವ ಪ್ರದೇಶವನ್ನು ಈ ಕೆಳಕಂಡAತೆ ನಮೂದಿಸಲಾಗಿದ್ದು ಅದರಂತೆ ಸದರಿ ಗ್ರಾಮಗಳ ವ್ಯಾಪ್ತಿಗೆ ಒಳಪಡುವ ಅರ್ಜಿದಾರರಿಂದ ಬೆಳೆ ಹಾನಿ ಪರಿಹಾರ ಅರ್ಜಿಗಳನ್ನು ಸ್ವೀಕರಿಸಲಾಗುವುದು. ಸದರಿ ವ್ಯಾಪ್ತಿಗೆ ಒಳಪಟ್ಟ ಸಾರ್ವಜನಿಕರು ಬೆಳೆಹಾನಿಯಾಗಿದ್ದಲ್ಲಿ ಸಂಬAಧಪಟ್ಟ ನಾಡಕಚೇರಿಯಲ್ಲಿ ಅರ್ಜಿಗಳನ್ನು ನೀಡಲು ತಹಶೀಲ್ದಾರರ ಕಚೇರಿ ಪ್ರಕಟಣೆ ತಿಳಿಸಿದೆ.

ಶೇ. ೩೩ ರಷ್ಟು ಹಾನಿ ಉಂಟಾದ ಹೋಬಳಿವಾರು ಗ್ರಾಮಗಳ ವಿವರ

ಮಡಿಕೇರಿ ಹೋಬಳಿ: ಗಾಳಿಬೀಡು, ನಿಡುವಟ್ಟು, ಬಾರಿ ಬೆಳ್ಳಚ್ಚು, ಕೆ. ನಿಡುಗಣೆ, ಹೆಬ್ಬೆಟ್ಟಗೇರಿ, ಹಚ್ಚಿನಾಡು, ೧ನೇ ಮೊಣ್ಣಂಗೇರಿ, ಕೆ. ಬಾಡಗ.

ನಾಪೋಕ್ಲು ಹೋಬಳಿ: ಚೇಲಾವರ, ಮರಂದೋಡ, ಯವಕಪಾಡಿ, ನಾಲಡಿ.

ಭಾಗಮಂಡಲ ಹೋಬಳಿ: ಆವಂದೂರು, ಬೆಟ್ಟಗೇರಿ, ಬೆಟ್ಟತ್ತೂರು, ಪದಕಲ್ಲು, ಕೋಪಟ್ಟಿ, ಸಿಂಗತ್ತೂರು, ಚೆರಂಡಟ್ಟಿ, ಕೊಟ್ಟೂರು, ಬಿ. ಬಾಡಗ, ಬೇಂಗೂರು, ಐವತ್ತೊಕ್ಲು, ಕಡಿಯತ್ತೂರು, ಕಾರುಗುಂದ.

ಸAಪಾಜೆ ಹೋಬಳಿ: ಮೇಕೇರಿ, ಬಿಳಿಗೇರಿ, ಹಾಕತ್ತೂರು, ಕಗ್ಗೋಡ್ಲು, ಕೆ. ಪೆರಾಜೆ, ಪಿ. ಪೆರಾಜೆ, ಎಂ. ಚೆಂಬು, ಯು. ಚೆಂಬು, ಸಂಪಾಜೆ, ದಬ್ಬಡ್ಕ, ಕಲ್ಲಾಳ, ಮದೆ, ಕಾಟಕೇರಿ, ಹೆರವನಾಡು, ಅರ್ವತ್ತೋಕ್ಲು, ಅರೆಕಲ್ಲು.