ಮಡಿಕೇರಿ, ಅ. ೧೦: ಭೂ ಮಂಡಲದಲ್ಲಿ ಜೀವಿಸುವ ಪ್ರತಿಯೊಂದು ಪ್ರಾಣಿ, ಪಕ್ಷಿಗಳು ಸಮತೋಲದಿಂದ ಬದುಕು ನಡೆಸು ವಂತಾಗಲು ಪರಿಸರ, ವನ್ಯ ಸಂಪನ್ಮೂಲ ಹಾಗೂ ಜಲ ಮೂಲ ಗಳನ್ನು ಸಂರಕ್ಷಿಸು ವಂತಾಗಬೇಕು ಎಂದು ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ ಸಲಹೆ ಮಾಡಿದ್ದಾರೆ.
ಅರಣ್ಯ ಇಲಾಖೆ, ವನ್ಯಜೀವಿ ವಿಭಾಗ ವತಿಯಿಂದ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆದ ೬೭ನೇ ವನ್ಯಜೀವಿ ಸಪ್ತಾಹ ಆಚರಣೆ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಕೋವಿಡ್-೧೯ ಸಂಕಷ್ಟ ಕಾಲದಲ್ಲಿ ಆಮ್ಲಜನಕ ದೊರೆಯದೆ ಇದ್ದಾಗ ಅನುಭವಿಸಿದ ಕಷ್ಟ ಹೇಳತೀರದು, ಪ್ರಾಕೃತಿಕ ವಿಕೋಪಗಳಿಗೆ ಅವಕಾಶ ಮಾಡದೆ, ತಮ್ಮ ಮಿತಿಯನ್ನು ಅರ್ಥಮಾಡಿಕೊಂಡು ಪ್ರತಿಯೊಬ್ಬರೂ ಜೀವನ ನಡೆಸಬೇಕು ಎಂದರು.
ವನ್ಯಜೀವಿ ಮತ್ತು ಅರಣ್ಯ ಸಂರಕ್ಷಣೆಯ ಕುರಿತು ಶಾಲೆಗಳಲ್ಲಿ ಜಾಗೃತಿ ಕಾರ್ಯಕ್ರಮಗಳು, ಕಾರ್ಯಾಗಾರಗಳು, ಸ್ಪರ್ಧೆಗಳ ಮೂಲಕ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಬೇಕು. ಕೊಡಗು ಜಿಲ್ಲೆಯಲ್ಲಿ ಅರಣ್ಯ, ಪರಿಸರ, ವನ್ಯ ಜೀವಿಗಳು ಸಮತೋಲನದಿಂದ ಕೂಡಿದೆ ಎಂದರು.
ಜಿಲ್ಲೆಯಲ್ಲಿ ವನ್ಯಪ್ರಾಣಿ ಮತ್ತು ಮಾನವನ ನಡುವೆ ಸಂಘರ್ಷ ನಡೆಯುತ್ತಲೇ ಇದೆ. ಇದನ್ನು ತಪ್ಪಿಸಬೇಕು. ಆ ನಿಟ್ಟಿನಲ್ಲಿ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ವತಿಯಿಂದ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.
ವನ್ಯಜೀವಿ ಸಂರಕ್ಷಣೆಗೆ ಅರಣ್ಯ ಇಲಾಖೆಯೊಂದಿಗೆ ಇತರರೂ ಕೈಜೋಡಿಸಬೇಕು. ಆದ್ದರಿಂದ ನಾವೆಲ್ಲರು ಕಾಡು-ನಾಡು ಸಂರಕ್ಷಿಸಲು ಪಣ ತೊಡಬೇಕು ಎಂದು ಕೋರಿದರು. ಕೊಡಗು ಜಿಲ್ಲೆಯಲ್ಲಿ ಸಮೃದ್ಧಿಯಾದ ಹಸಿರು ಪರಿಸರದ ಮಧ್ಯೆ ಬದುಕುವ ಭಾಗ್ಯ ನಮಗೆ ದೊರೆತಿದ್ದು, ಅದರ ರಕ್ಷಣೆ ಮಾಡುವ ಕರ್ತವ್ಯವು ನಮ್ಮದಾಗಿರುತ್ತದೆ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ ಅವರು ವನ್ಯಜೀವಿ ಸಪ್ತಾಹ ಆಚರಣೆಯು ನಿರ್ದಿಷ್ಟ ಗುರಿ ಮತ್ತು ಉದ್ದೇಶವನ್ನು ಹೊಂದಿರಬೇಕು. ನಮ್ಮ ಆಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗಿರದೇ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳುವಂತಾಗಬೇಕು ಎಂದರು.
ವನ್ಯಜೀವಿ ಸಪ್ತಾಹ ಸಂಬAಧಿಸಿದAತೆ ಕಳೆದ ಒಂದು ವಾರದಿಂದ ಹಲವಾರು ಜಾಗೃತಿ ಕಾರ್ಯಕ್ರಮಗಳು ಅರಣ್ಯ ಇಲಾಖೆಯ ಕಡೆಯಿಂದ ಹಮ್ಮಿಕೊಳ್ಳಲಾಗಿದ್ದು, ಕೇವಲ ಈ ದಿನದ ಮಟ್ಟಿಗೆ ಆಚರಿಸಲಾಗುವ ಕಾರ್ಯಕ್ರಮ ವಾಗಿರದೇ ಪರಿಸರ ಸಂರಕ್ಷಣೆಯ ಕಾರ್ಯದ ಬಗ್ಗೆ ನಾವು ಹೇಳ ಬಯಸುವ ವಿಷಯವನ್ನು ವ್ಯವಸ್ಥಿತವಾಗಿ ಕಾರ್ಯ ರೂಪಕ್ಕೆ ತರುವ ಕೆಲಸ ನಡೆಯಬೇಕಿದೆ. ಸಂರಕ್ಷಣೆಯ ಜವಾಬ್ದಾರಿಯನ್ನು ಜೀವನದಲ್ಲಿಯು ಸಹ ಅಳವಡಿಸಿ ಕೊಳ್ಳುವಂತಾಗಬೇಕು ಎಂದು ಹೇಳಿದರು.
‘ವನ್ಯಜೀವಿ ಸಪ್ತಾಹ ಆಚರಣೆಯ ಮುಖ್ಯ ಉದ್ದೇಶ ಸಾರ್ವಜನಿಕರಲ್ಲಿ ಮತ್ತು ಮಕ್ಕಳಲ್ಲಿ ಜಾಗೃತಿ ಮೂಡಿಸುವುದಾಗಿದೆ. ಪೃಥ್ವಿ ಕೇವಲ ಮನುಷ್ಯರ ಸ್ವತ್ತಲ್ಲ, ವನ್ಯ ಜೀವಿಗಳಿಗೂ ಸಹ ಭೂಮಿಯ ಮೇಲೆ ಜೀವಿಸುವ ಸ್ವಾತಂತ್ರö್ಯ ಮತ್ತು ಸಮಾನತೆಯಿದೆ. ನಮ್ಮನ್ನು ನಾವು ರಕ್ಷಿಸಿಕೊಳ್ಳುವಂತೆ ವನ್ಯ ಜೀವಿ ಮತ್ತು ಪರಿಸರ ಸಂರಕ್ಷಣೆಗೆ ಕೈಜೋಡಿಸುವಂತೆ ಕೋರಿದರು.’
ಸಂದೇಶ್ ಕಡೂರು ಅವರ ಕೊಡಗಿನ ಸೌಂದರ್ಯದ ಕಿರುಚಿತ್ರ ಪ್ರದರ್ಶನ ಮಾಡಲಾಯಿತು. ಸಂದೇಶ್ ಕಡೂರು, ಕಲಾವಿದ ಇ.ರಾಜು ಹಾಗೂ ಮುಂಚೂಣಿ ಸಿಬ್ಬಂದಿಗಳ ಸೇವೆಯನ್ನು ಪರಿಗಣಿಸಿ ಗೌರವಿಸ ಲಾಯಿತು.
ವನ್ಯಜೀವಿ ಸಪ್ತಾಹದಿಂದ ಆನ್ಲೈನ್ ರಸಪ್ರಶ್ನೆ, ಛಾಯಚಿತ್ರ ಸ್ಪರ್ಧೆ, ಚಿತ್ರಕಲೆ, ಪಕ್ಷಿ ವೀಕ್ಷಣೆ ಕಾರ್ಯಕ್ರಮ ನಡೆಯಿತು. ಇ.ರಾಜು ಮತ್ತು ತಂಡದಿAದ ಬೀದಿ ನಾಟಕ ನಡೆಯಿತು. ವಿಜೇತ ರಾದವರಿಗೆ ಬಹುಮಾನ ವಿತರಿಸಲಾಯಿತು. ಮಡಿಕೇರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ. ಪೂವಯ್ಯ, ಸಾಮಾಜಿಕ ಅರಣ್ಯ ಮಡಿಕೇರಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಚ್. ಪೂರ್ಣಿಮ, ಶಿವರಾಮ್ ಬಾಬು ಇತರರು ಇದ್ದರು.
ಉಪ ವಲಯ ಅರಣ್ಯಾಧಿಕಾರಿ ಶ್ರೀಧರ್ ಪ್ರಕಾಶ್ ಜೆ.ಕೆ ನಿರೂಪಿಸಿದರು, ಜೆ.ಸಿ ಕಾಂತಿಮತಿ ಪ್ರಾರ್ಥಿಸಿದರು, ಎಸಿಎಫ್ ಡಿ.ಎಸ್ ದಯಾನಂದ್ ಸ್ವಾಗತಿಸಿದರು, ಆರ್ಎಫ್ಒ ಮರಿಸ್ವಾಮಿ ವಂದಿಸಿದರು.