ಗೋಣಿಕೊಪ್ಪ ವರದಿ, ಸೆ. ೨೬: ಕೊಡಗು ಜಿಲ್ಲಾ ಬ್ರಾಹ್ಮಣರ ಕ್ಷೇಮಾಭಿವೃದ್ದಿ ಸಂಘದ ವಾರ್ಷಿಕ ಮಹಾಸಭೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಅಕ್ಟೋಬರ್ ೩೧ ರಂದು ಕೈಕೇರಿಯಲ್ಲಿರುವ ಸಂಘದ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಸಂಘದ ಅಧ್ಯಕ್ಷ ಶ್ರೀಪತಿ ಪಡಂತಾಯ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸಮಾಜದ ಸದಸ್ಯರ ಮಕ್ಕಳು ಶೈಕ್ಷಣಿಕವಾಗಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದವರಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಎಸ್ಸೆಸ್ಸೆಲ್ಸಿ ಸಿಬಿಎಸ್‌ಸಿ, ಐಸಿಎಸ್‌ಸಿ ವಿಭಾಗದ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ. ೮೫ ಅಂಕ, ಪದವಿ ಸ್ನಾತಕ, ಸ್ನಾತಕ್ಕೋತ್ತರ ಪದವಿ, ಡಿಪ್ಲೋಮೋ, ಮೆಡಿಕಲ್ (ಎಂಬಿಬಿಎಸ್, ಬಿಎಎಂಎಸ್) ಇಂಜಿನಿಯರಿAಗ್‌ನಲ್ಲಿ ಶೇ. ೭೫ ಅಂಕ ಪಡೆದವರು ಅರ್ಜಿ ಸಲ್ಲಿಸಬೇಕಿದೆ. ಹೆಚ್ಚಿನ ಮಾಹಿತಿಗೆ ೯೪೪೯೭೬೧೨೯೬ ಸಂಖ್ಯೆಯನ್ನು ಸಂಪರ್ಕಿಸಲು ಸಂಘದ ಪ್ರಕಟಣೆ ಕೋರಿದೆ.