ಮಡಿಕೇರಿ, ಸೆ. ೨: ಮಡಿಕೇರಿಯ ಇನ್ನರ್ ವೀಲ್ ಸಂಸ್ಥೆ ವತಿಯಿಂದ ಸ್ತನ್ಯ ಪಾನ ಜಾಗೃತಿ ದಿನವನ್ನು ಆಚರಿಸಲಾಯಿತು. ಮಂಗಳಾದೇವಿ ನಗರದಲ್ಲಿನ ಬಾಣಂತಿ ಮತ್ತು ಕಂದಮ್ಮನಿಗೆ ಅಗತ್ಯವಾಗಿದ್ದ ಪೌಷ್ಟಿಕಾಂಶದ ಹಣ್ಣು, ಮಕ್ಕಳ ಬಟ್ಟೆ, ಪರಿಕರಗಳು, ಮಾಸ್ಕ್, ಸ್ಯಾನಿಟೈಸರ್ ಸೇರಿದಂತೆ ಅನೇಕ ವಸ್ತುಗಳನ್ನು ನೀಡಿದ ಇನ್ನರ್ ವೀಲ್ ಅಧ್ಯಕ್ಷೆ ಶಫಾಲಿ ರೈ, ತಾಯಿ ಮಗುವಿಗೆ ಆರೋಗ್ಯ ಸಂಬAಧಿತ ಎಲ್ಲಾ ರೀತಿಯ ನೆರವು ನೀಡುವುದಾಗಿ ತಿಳಿಸಿದರು.

ಡಾ. ರೇಣುಕಾ ಸುಧಾಕರ್ ಈ ಸಂದರ್ಭ ಮಾತನಾಡಿ, ಮಕ್ಕಳಿಗೆ ತಾಯಿಯ ಹಾಲಿನ ಅಗತ್ಯತೆ ಮತ್ತು ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಇನ್ನರ್ ವೀಲ್ ಕಾರ್ಯದರ್ಶಿ ಶಮ್ಮಿ ಪ್ರಭು, ಹಾಜರಿದ್ದರು.