ವೀರಾಜಪೇಟೆ, ಸೆ. ೨: ಆರ್ಜಿ ವಲಯದ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಕಿರುಮಕ್ಕಿ, ಆರ್ಜಿ, ಕಲ್ಲುಬಾಣೆ ಭಾಗದಲ್ಲಿ ಕೊರೊನಾ ಕಾಲದಲ್ಲಿ ಸಂಕಷ್ಟಕ್ಕೀಡಾಗಿದ್ದ ಕುಟುಂಬಗಳಿಗೆ ದಿನಸಿ ಪದಾರ್ಥಗಳನ್ನೊಳಗೊಂಡ ಕಿಟ್ ವಿತರಿಸಲಾಯಿತು.

ಈ ಸಂದರ್ಭ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಬಿ.ಎಂ. ಗಣೇಶ್, ಶಕ್ತಿ ಕೇಂದ್ರದ ಪ್ರಮುಖರುಗಳಾದ ಬಿ.ಎಂ. ರಮೇಶ್, ಉದಯ, ಬಿ.ಸಿ. ಕಿರಣ್ ಜೀವನ್ ಹಾಗೂ ಪವನ್ ಇದ್ದರು.