ಶನಿವಾರಸಂತೆ, ಆ. ೩೦: ಶನಿವಾರಸಂತೆ ನಾಡಕಚೇರಿಯಲ್ಲಿ ೨೦೨೦-೨೧ನೇ ಸಾಲಿನ ಬೆಳೆ ಸಮೀಕ್ಷೆಯ ಸಂಬAಧ ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆ ವತಿಯಿಂದ ಶನಿವಾರಸಂತೆ ಹೋಬಳಿಯ ಖಾಸಗಿ ಬೆಳೆ ಸಮೀಕ್ಷೆಗಾರರಿಗೆ ಬೆಳೆ ಸಮೀಕ್ಷೆಯ ಮೊಬೈಲ್ ಆ್ಯಪ್ ಬಗ್ಗೆ ತರಬೇತಿ ನೀಡಲಾಯಿತು.

ಈ ಸಂದರ್ಭ ಕಂದಾಯ ಇಲಾಖೆಯ ಕಂದಾಯ ಪರಿವೀಕ್ಷಕ ಬಿ.ಆರ್. ಮಂಜುನಾಥ, ಕೃಷಿ ಅಧಿಕಾರಿ ಮನಸ್ವಿ, ಮಾಸ್ಟರ್ ಟ್ರೆöÊನರ್ ಕೆ.ಎಸ್. ಸಂತೋಷ್ ಹಾಗೂ ಕಂದಾಯ ಇಲಾಖೆಯ ರುದ್ರಯ್ಯ, ಸಿಬ್ಬಂದಿಗಳು ಉಪಸ್ಥಿತರಿದ್ದರು.