ಕೂಡಿಗೆ, ಆ. ೩೦: ಕೂಡು ಮಂಗಳೂರು ಗ್ರಾ.ಪಂ.ವ್ಯಾಪ್ತಿಯ ಹಾರಂಗಿ ಮಾರ್ಗದಲ್ಲಿ ಎಂಟು ಗ್ರಾಮಗಳಿದ್ದು ಈ ವ್ಯಾಪ್ತಿಯ ಸಾರ್ವಜನಿಕರು ಕುಶಾಲನಗರದತ್ತ ಬಂದು ಹೋಗಲು ಬಸ್ ಸೌಕರ್ಯ ಇಲ್ಲದೆ ಅನಾನುಕೂಲ ವಾಗಿದೆ. ಆದ್ದರಿಂದ ಬಸ್ ವ್ಯವಸ್ಥೆಯನ್ನು ಒದಗಿಸಬೇಕೆಂದು ಮಡಿಕೇರಿ ಘಟಕದ ಅಧಿಕಾರಿ ಗೀತಾ ಅವರಿಗೆ ಕೂಡು ಮಂಗಳೂರು ಗ್ರಾ.ಪಂ. ಹಾರಂಗಿ ವಿಭಾಗದ ಸದಸ್ಯ ಎಂ. ಮಣಿಕಂಠ ಗ್ರಾಮಸ್ಥರ ಪರವಾಗಿ ಮನವಿ ಸಲ್ಲಿಸಿದರು. ಮನವಿಯಲ್ಲಿ ಕುಶಾಲನಗರ ಮಾರ್ಗಕ್ಕೆ ಹೊಂದಿಕೊAಡಿರುವ ಸುಂದರನಗರ ಚಿಕ್ಕತ್ತೂರು ಹುಲುಗುಂದ ಅತ್ತೂರು ಮಾರ್ಗಗಳಿಂದ ನೂರಾರು ವಿದ್ಯಾರ್ಥಿಗಳು ಕುಶಾಲನಗರದ ಕಾಲೇಜ್‌ಗಳಿಗೆ ತೆರಳುತ್ತಾರೆ. ಅಲ್ಲಿದೆ ಗ್ರಾಮಸ್ಥರು ಕೆಲಸಕ್ಕಾಗಿ ಕುಶಾಲನಗರಕ್ಕೆ ಹೋಗುತ್ತಾರೆ. ಆದರೆ ಬಸ್ ಸೌಲಭ್ಯವಿಲ್ಲದೆ ಪರದಾಡುವಂತಾಗಿದೆ. ಈ ಸಮಸ್ಯೆಯನ್ನು ತಪ್ಪಿಸಲು ಬಸ್ ವ್ಯವಸ್ಥೆ ಒದಗಿಸಬೇಕೆಂದು ಮನವಿಯಲ್ಲಿ ಕೋರಿದ್ದಾರೆ.