ಸುಂಟಿಕೊಪ್ಪ, ಆ.೨೯: ಸೋಮವಾರಪೇಟೆ ತಾಲೂಕು ಬಿಜೆಪಿ ಮಂಡಲ ಹಿಂದುಳಿದ ವರ್ಗಗಳ(ಒಬಿಸಿ) ಮೋರ್ಚಾದ ಅಧ್ಯಕ್ಷರಾಗಿ ಪಿ. ಎಸ್. ಗಂಗಾಧರ್, ಪ್ರಧಾನ ಕಾರ್ಯದರ್ಶಿ ಗಳಾಗಿ ಸುಂಟಿಕೊಪ್ಪದ ಪಿ. ಆರ್. ಸುನಿಲ್‌ಕುಮಾರ್ ಹಾಗೂ ಸುಷ್ಮಾ ಸುಧಾಕರ್ ಶೆಟ್ಟಿ ಸೋಮವಾರಪೇಟೆ ನೇಮಕಗೊಳಿಸಲಾಯಿತು. ಸೋಮವಾರಪೇಟೆ ತಾಲೂಕು ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕಾರಿಣಿ ಸಭೆಯ ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ (ಒಬಿಸಿ) ಅಧ್ಯಕ್ಷ ಆನಂದ ರಘು ಉದ್ಘಾಟಿಸಿದರು. ನೂತನ ಆಡಳಿತ ಮಂಡಳಿಗೆ ಉಪಾಧ್ಯಕ್ಷರುಗಳಾಗಿ ಕೆ.ಆರ್.ಸತೀಶ್, ಟಿ.ಕೆ. ಸುಮೇಶ್, ಕೆ. ಕೆ. ರಮೇಶ್, ಕೆ. ಯು. ರುಕ್ಮಿಣಿ, ಕಾರ್ಯದರ್ಶಿಗಳಾಗಿ ಎಸ್. ಸುಬ್ರಮಣಿ, ಕೆ.ಎಲ್.ಉದಯಕುಮಾರ್, ಪವಿತ್ರ ಶೇಷಪ್ಪ, ಪಿ.ಜಿ.ಶಾಂತಿ ಹಾಗೂ ಕಾರ್ಯಕಾರಿ ಪದಾಧಿಕಾರಿಗಳಾಗಿ ಪೂರ್ಣತೇಜ, ಮಂಜುನಾಥ್ ಕೆ., ಎಂ.ಅಭಿಷೇಕ್, ಭಾಸ್ಕರ್, ಬಾಲಕೃಷ್ಣ,ಕೆ. ಆರ್. ರಾಘವೇಂದ್ರ, ಸುರೇಶ್ ಪೂಜಾರಿ, ಟಿ.ಆರ್.ವಿಜಯ, ಎಂ. ಕೆ. ಗೋಪಾಲ್ ಹಾಗೂ ವಿನಿಶ್ ನೇಮಕಗೊಂಡರು. ಸೋಮವಾರಪೇಟೆ ತಾಲೂಕು ಮಂಡಲ ಅಧ್ಯಕ್ಷ ಮನುಕುಮಾರ್ ರೈ, ಜಿಲ್ಲಾ ಒಬಿಸಿ ಪ್ರಧಾನ ಕಾರ್ಯದರ್ಶಿ ಮೋಹನ್ ಉಪಾಧ್ಯಕ್ಷ ಬಿ.ಕೆ.ಮೋಹನ ಹಾಗೂ ಸತೀಶ್ ಕುಂದರ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.