ಮಡಿಕೇರಿ, ಆ. ೩೦: ಕಲೆ, ಸಾಹಿತ್ಯ, ಸಂಸ್ಕೃತಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಾರ್ಯಾಚರಿಸುತ್ತಿರುವ ಗುರುಕುಲ ಪ್ರತಿಷ್ಠಾನ ಸಾಹಿತ್ಯಕ ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ಗಮನಿಸಿ ೨೦೨೧ನೇ ಸಾಲಿನಲ್ಲಿ ರಾಜ್ಯಮಟ್ಟದ ‘ಗುರುಕುಲ ಸೃಜನಶೀಲ ಪ್ರಶಸ್ತಿ’ ನೀಡಲಾಗಿದೆ. ಅಂತರರಾಜ್ಯ ಘಟಕ ಸೇರಿದಂತೆ ಒಟ್ಟು ೨೧ ಘಟಕಗಳಿಗೆ ಪ್ರಶಸ್ತಿ ನೀಡಲಾಗಿದ್ದು, ಈ ಪೈಕಿ ಕೊಡಗು ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ ಎಂದು ಕೊಡಗು ಘಟಕದ ಅಧ್ಯಕ್ಷೆ ಕೆ.ಶೋಭಾ ರಕ್ಷಿತ್ ತಿಳಿಸಿದ್ದಾರೆ.