ಶನಿವಾರಸAತೆ, ಜೂ. ೨೨: ನಿಡ್ತ ಪಂಚಾಯಿತಿ ವ್ಯಾಪ್ತಿಯ ಹಾರೆಹೊಸೂರು ಚೌಡೇನಹಳ್ಳಿ ಗ್ರಾಮದ ನಿವಾಸಿ ಶಶಿಕಲಾ ಜಗದೀಶ್ ಎಂಬವರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದಾಗಿ ದೊರೆತ ಮಾಹಿತಿ ಮೇರೆ ಶನಿವಾರಸಂತೆ ವೃತ್ತ ನಿರೀಕ್ಷಕ ಎಸ್. ಪರಶಿವ ಮೂರ್ತಿ ಸಿಬ್ಬಂದಿಗಳೊAದಿಗೆ ದಾಳಿ ನಡೆಸಿ ಮಹಿಳೆಯನ್ನು ಬಂದಿಸಿದ್ದಾರೆ.

ದಾಳಿಯಲ್ಲಿ ಚಾಲಕ ಕುಮಾರ್, ಸಿಬ್ಬಂದಿಗಳಾದ ರವಿಚಂದ್ರ, ಪ್ರಶಾಂತ್ ಪಾಟೀಲ್, ಸೋನಿ, ರಾಧ ಪಾಲ್ಗೊಂಡಿದ್ದರು.