*ವೀರಾಜಪೇಟೆ, ಜೂ. ೨೧: ಇತ್ತೀಚೆಗೆ ಪೊಲೀಸ್ ಹಲ್ಲೆಯಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗಿರುವ ರಾಯ್ ಡಿಸೋಜ ಸಾವಿನ ಪ್ರಕರಣಕ್ಕೆ ಸೂಕ್ತ ನ್ಯಾಯ ಒದಗಿಸುವಂತೆ ಅವರ ತಾಯಿ ಮೆಟಿಲ್ಡ ಲೋಬೋ ಹಾಗೂ ಸಹೋದರ ರಾಬಿನ್ ಡಿಸೋಜ ಶಾಸಕ ಕೆ.ಜಿ. ಬೋಪಯ್ಯ ಅವರಿಗೆ ಮನವಿ ಸಲ್ಲಿಸಿದರು. ಕೆಲವರಿಂದ ತನಿಖೆಯನ್ನು ದಿಕ್ಕು ತಪ್ಪಿಸುವ ಕೆಲಸವಾಗುತ್ತಿದೆ. ಅಲ್ಲದೆ ನಮಗೆ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದರು. ಮನವಿ ಸ್ವೀಕರಿಸಿ ಮಾತನಾಡಿದ ಶಾಸಕರು, ಅಂದು ಮೃತಪಟ್ಟ ದಿನವೇ ಮಡಿಕೇರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲು ಮತ್ತು ತಪ್ಪಿತಸ್ಥ ಯಾರೇ ಇದ್ದರೂ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೆ, ಈಗಾಗಲೇ ಸಿಐಡಿ ಅಧಿಕಾರಿಗಳು ಜೊತೆಯಲ್ಲಿ ಮಾತನಾಡಿದ್ದೇನೆ ಅವರು ತನಿಖೆ ಮಾಡುತ್ತಿದ್ದಾರೆ ಎಂದು ತಿಳಿಸಿ, ಕುಟುಂಬಕ್ಕೆ ಸ್ಥೆöÊರ್ಯ ತುಂಬಿದರು.

ಈ ಸಂದರ್ಭ ರಾಜ್ಯ ಅಲ್ಪಸಂಖ್ಯಾತ ವಿಭಾಗದ ಜೋಕೀಂ ರೋಡ್ರಿಗಸ್, ಲೂಯಿಸ್ ಬ್ರೂಗಾಂಜ, ಮರ್ವಿನ್ ಲೋಬೊ, ಜಯ ಕರ್ನಾಟಕ ಸಂಘಟನೆಯ ಮಾಥಾಯಿಸ್, ಪ್ರಶಾಂತ್ ಲೋಬೊ ಇದ್ದರು.