ವೀರಾಜಪೇಟೆ, ಮೇ ೨೫: ಮೈದಾನದಲ್ಲಿ ಆಟವಾಡುತ್ತಿದ್ದ ಯುವಕರ ಮೇಲೆ ಕೊರೊನಾ ನಿಯಮ ಉಲ್ಲಂಘನೆ ಆರೋಪದಡಿ ವೀರಾಜಪೇಟೆ ತಾಲೂಕಿನ ಬೇಟೋಳಿ ಪಂಚಾಯಿತಿ ವ್ಯಾಪ್ತಿಯ ಚಿಟ್ಟಡೆ ಗ್ರಾಮದ ಆಟದ ಮೈದಾನದಲ್ಲಿ ಕೆಲವು ಯುವಕರು ಕಾಲ್ಚೆಂಡು ಆಟವಾಡುತ್ತಿದ್ದರು ಎಂದು ತಿಳಿದು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ೮ರಿಂದ ೧೦ ಯುವಕರು ಆಟವಾಡುತ್ತಿದ್ದರು. ಚಿಟ್ಟಡೆ ಮತ್ತು ಗುಂಡಿಗೆರೆ ಗ್ರಾಮಕ್ಕೆ ಸೇರಿದ ಯುವಕರು ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಆಟವಾಡುತಿದ್ದರು. ಯುವಕರ ಮೇಲೆ ವೀರಾಜಪೇಟೆ ನಗರಠಾಣೆಯಲ್ಲಿ ಕೋವಿಡ್ ನಿಯಮ ಉಲ್ಲಂಘನೆ ವಿಪತ್ತು ನಿರ್ವಾಹಣಕಾಯ್ದೆ ೫೧ (ಬಿ) ಮತ್ತು ೨೬೯ ಐ.ಪಿ.ಸಿ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿದೆ. ಅಲ್ಲದೆ, ಯುವಕರು ಬಳಸಲಾಗಿದ್ದ ನಾಲ್ಕು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ವೀರಾಜಪೇಟೆ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ ಜಗದೀಶ್ ಧೂಳ ಶೆಟ್ಟಿ, ಸಿಬ್ಬಂದಿಗಳಾದ ಮುನೀರ್, ಮುಸ್ತಾಫ, ಗಿರೀಶ್ ಮತ್ತು ಗೀತಾ ಅವರುಗಳು ಕಾರ್ಯಾಚರಣೆಯಲ್ಲಿ ಭಾಗಿಗಳಾದರು.

-ಕೆ.ಕೆ.ಎಸ್ ವೀರಾಜಪೇಟೆ.