ಕುಶಾಲನಗರ, ಮೇ ೨೧: ಕುಶಾಲನಗರದ ಪ್ರವೇಶ ದ್ವಾರ ಕಾವೇರಿ ನದಿಯೊಳಗೆ ನೀರು ನಾಯಿ ಪತ್ತೆಯಾಗಿದೆ. ೫ ರಿಂದ ೬ ನೀರುನಾಯಿಗಳು ನದಿಯೊಳಗೆ ಮೀನು ಹಿಡಿದು ತಿನ್ನುತ್ತಿದ್ದ ಚಿತ್ರಣ ಕಂಡು ಬಂತು. ಕಾವೇರಿ ನದಿಯೊಳಗೆ ನೀರುನಾಯಿ ಕಂಡಿದ್ದು ಇದೇ ಮೊದಲು ಎಂದು ಸ್ಥಳೀಯರು ತಿಳಿಸಿದ್ದಾರೆ.