ಗೋಣಿಕೊಪ್ಪಲು, ಮೇ 9: ಮುಂಜಾಗ್ರತಾ ಕ್ರಮವಾಗಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಟ್ಟಂಗಾಲದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ಸ್ಯಾನಿಟೈಸ್ ಸಿಂಪಡಣೆ ಮಾಡಲಾಯಿತು.

ಬಿಟ್ಟಂಗಾಲ ವ್ಯಾಪ್ತಿಯ ಅಂಬಟ್ಟಿ, ಪೆಗ್ಗರಿಕಾಡು, ಬಿ.ಶೆಟ್ಟಿಗೇರಿ ಜಂಕ್ಷನ್ ಬಸ್ ತಂಗುದಾಣ, ಮುಖ್ಯ ರಸ್ತೆಯ ಅಂಗಡಿ ಮುಂಗಟ್ಟು, ಗ್ರಾಮ ಪಂಚಾಯಿತಿ ಕಚೇರಿ, ಪಶುವೈದ್ಯ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ,ನ್ಯಾಯ ಬೆಲೆ ಅಂಗಡಿ, ಪಾಸಿಟಿವ್ ಪ್ರಕರಣದ ಮನೆಗಳಿಗೆ ಸೇರಿದಂತೆ ಇತರೆಡೆಗಳಲ್ಲಿ ಮುಂಜಾನೆಯಿಂದಲೇ ಶ್ರೀ ಧರ್ಮಸ್ಥಳ ಗಾಮಾಭಿವೃದ್ಧಿ ಯೋಜನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕಿ ರೇಖಾ ಗಣೇಶ್ ಮುಂದಾಳತ್ವದಲ್ಲಿ ಸ್ಯಾನಿಟೈಸರ್ ಸಿಂಪಡಿಸಲಾಯಿತು.

ಸದಸ್ಯರುಗಳಾದ ಅಕ್ಷತ್, ಮೋಹನ್, ಗಣೇಶ್ ಗೌಡ, ಬಿ.ಎನ್.ಯೋಗೇಶ್ ಬಿ.ಎನ್.ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಸದಸ್ಯರಾದ ರಾಜ ಸುಬ್ಬಯ್ಯ, ಲಿಖಿತ್ ಸೇರಿದಂತೆ ಇನ್ನಿತರರು ಹಾಜರಿದ್ದರು.