ನಾಪೋಕ್ಲು, ಮೇ ೫: ನಾಪೋಕ್ಲು- ಕಕ್ಕಬ್ಬೆ- ವೀರಾಜಪೇಟೆ ಮುಖ್ಯ ರಸ್ತೆಯ ಕೊಳಕೇರಿ ಬಳಿ ಎರಡು ಕಡೆಗಳಲ್ಲಿ ಸುಮಾರು ೫೦ ಮೀ. ನಷ್ಟು ರಸ್ತೆಯನ್ನು ಗುಂಡಿ ಮುಚ್ಚದೇ ಹಾಗೆಯೇ ಉಳಿಸಿಕೊಂಡಿದ್ದು, ಮಳೆಯ ಕಾರಣದಿಂದ ನೀರು, ಕೆಸರು ತುಂಬಿ ಈ ರಸ್ತೆಯಲ್ಲಿ ವಾಹನ ಸಂಚಾರ ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಈ ವ್ಯಾಪ್ತಿಯಲ್ಲಿ ಕಳೆದ ೨೦ ದಿನಗಳಿಂದ ಪ್ರತೀನಿತ್ಯ ಮಳೆ ಸುರಿಯುತ್ತಿದ್ದು, ನೀರು ರಸ್ತೆಯ ಗುಂಡಿಗಳಲ್ಲಿ ಸಂಗ್ರಹಗೊಳ್ಳುತ್ತಿದ್ದು, ಗುಂಡಿ ಯಾವದು ರಸ್ತೆ ಯಾವದು ಎಂದು ತಿಳಿಯದಂತಾಗಿದೆ. ಈಗಾಗಲೇ ಹಲವು ದ್ವಿಚಕ್ರ ವಾಹನಗಳ ಸವಾರರು ಇಲ್ಲಿ ಅಪಘಾತಕ್ಕೀಡಾಗಿದ್ದಾರೆ. ಆದುದರಿಂದ ಸಂಬAಧಪಟ್ಟವರು ಈ ರಸ್ತೆಯಲ್ಲಿರುವ ಗುಂಡಿ ಮುಚ್ಚಲು ಕೂಡಲೇ ಕ್ರಮಕೈಗೊಳ್ಳಬೇಕೆಂದು ಈ ವ್ಯಾಪ್ತಿಯ ಸಾರ್ವಜನಿಕರು ಆಗ್ರಹಿಸಿದ್ದಾರೆ.