ಚೆಟ್ಟಳಿ, ಮೇ ೩: ನಾಗರಹೊಳೆ ರಾಷ್ಟಿçÃಯ ಉದ್ಯಾನವನದ ಆನೆ ಚೌಕೂರು ವಲಯದಲ್ಲಿ ಒಂಟಿ ಸಲಗ ಆನೆಯೊಂದು ಸಾವನ್ನಪ್ಪಿರುವ ಘಟನೆ ನಡೆದಿದೆ. ಉದ್ಯಾನವನದ ಚನ್ನಂಗಿ ಬೀಟ್‌ನ ಅಬ್ಬೂರು ಶಾಖೆಯ ಅನಂತರಾಮು ಎಂಬವರ ತೋಟದ ಪಕ್ಕದ ಕೆರೆಯಲ್ಲಿ ೩೫ ರಿಂದ ೪೦ ವರ್ಷ ವಯಸ್ಸಿನ ಈ ಆನೆ ಗಾಯಗೊಂಡು ಸಾವನ್ನಪ್ಪಿದೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಎಸಿಎಫ್ ಸತೀಶ್, ಉಪ ವಲಯ ಅರಣ್ಯಾಧಿಕಾರಿ ಚನ್ನವೀರೇಶ ಗಾಣಿಗೇರ ಭೇಟಿ ನೀಡಿ ಪರಿಶೀಲಿಸಿದರು.ಸಾಕಾನೆಗಳಾದ ಅಭಿಮನ್ಯು, ಮಹೇಂದ್ರ ಸಹಾಯದಿಂದ ಸಲಗದ ಶವ ಮೇಲೆತ್ತಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಪಶು ವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ. ಮುಜೀಬ್ ರೆಹಮಾನ್ ಮರಣೋತ್ತರ ಪರೀಕ್ಷೆ ನಡೆಸಿದರು. ನಂತರ ಸ್ಥಳದಲ್ಲೇ ಸಲಗದ ಶವವನ್ನು ಸುಟ್ಟು ಹಾಕಲಾಯಿತು. ಮತ್ತೊಂದು ಗಂಡಾನೆ ತಿವಿದಿದ್ದರಿಂದ ಮರಣ ಹೊಂದಿದೆ ಎಂದು ಡಾ.ಮುಜೀಬ್ ತಿಳಿಸಿದ್ದಾರೆ. - ಕರುಣ್ ಕಾಳಯ್ಯ