ಶ್ರೀಮಂಗಲ, ಏ. ೧೨: ಮರೆನಾಡ್ ಶೂರ‍್ಸ್ ಕ್ಲಬ್ ಆಶ್ರಯದಲ್ಲಿ ಬಿರುನಾಣಿಯ ಮರೆನಾಡ್ ಪ್ರೌಢಶಾಲಾ ಮೈದಾನದಲ್ಲಿ ೧೨ ಬೋರ್ ಮತ್ತು ಪಾಯಿಂಟ್ ೨೨ ವಿಭಾಗದ ಮುಕ್ತ ಶೂಟಿಂಗ್ (ತೆಂಗಿನ ಕಾಯಿಗೆ ಗುಂಡು ಹೊಡೆಯುವ) ಸ್ಪರ್ಧೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ೨೦೦ಕ್ಕೂ ಅಧಿಕ ಸ್ಪರ್ಧಾರ್ಥಿಗಳು ಪಾಲ್ಗೊಂಡಿದ್ದರು.

ಸ್ಪರ್ಧೆಯನ್ನು ಬಿರುನಾಣಿ ಕೃಷಿ ಪತ್ತಿನ ಸಹಕಾರ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚೇರಂಡ ಪಾಪುಕಾರ್ಯಪ್ಪ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಮೂಲಕ ಉದ್ಘಾಟಿಸಿದರು.

ಮಂಗಳೂರು ಬಜ್ಪೆ ಸಿಮನ್ಸ್ ಗನ್‌ಹೌಸ್‌ನ ಮುಖ್ಯ ಪ್ರಾಯೋಜಕತ್ವದಲ್ಲಿ ನಡೆದ ಸ್ಪರ್ಧೆಯಲ್ಲಿ ಪಾಯಿಂಟ್ ೨೨ ವಿಭಾಗದಲ್ಲಿ ಸುಂಟಿಕೊಪ್ಪ ಅಂದಗೋವೆ ಗ್ರಾಮದ ಕೇಚೀರ ಶಮನ್‌ಬೆಳ್ಯಪ್ಪ (ಪ್ರಥಮ), ಪರಕಟಕೇರಿ ಗ್ರಾಮದ ಕಾಳಿಮಾಡ ಶರತ್‌ಮುತ್ತಪ್ಪ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚೇರಂಡ ಪಾಪುಕಾರ್ಯಪ್ಪ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಮೂಲಕ ಉದ್ಘಾಟಿಸಿದರು.

ಮಂಗಳೂರು ಬಜ್ಪೆ ಸಿಮನ್ಸ್ ಗನ್‌ಹೌಸ್‌ನ ಮುಖ್ಯ ಪ್ರಾಯೋಜಕತ್ವದಲ್ಲಿ ನಡೆದ ಸ್ಪರ್ಧೆಯಲ್ಲಿ ಪಾಯಿಂಟ್ ೨೨ ವಿಭಾಗದಲ್ಲಿ ಸುಂಟಿಕೊಪ್ಪ ಅಂದಗೋವೆ ಗ್ರಾಮದ ಕೇಚೀರ ಶಮನ್‌ಬೆಳ್ಯಪ್ಪ (ಪ್ರಥಮ), ಪರಕಟಕೇರಿ ಗ್ರಾಮದ ಕಾಳಿಮಾಡ ಶರತ್‌ಮುತ್ತಪ್ಪ (ಪ್ರಥಮ), ನಾಪೋಕ್ಲುವಿನ ಅಜ್ಜೇಟ್ಟಿರ ಗೌತಮ್‌ಮಂದಣ್ಣ (ದ್ವಿತೀಯ) ಮತ್ತು ಟಿ.ಶೆಟ್ಟಿಗೇರಿಯ ಮಚ್ಚಮಾಡ ಶ್ಯಾಮ್ (ತೃತೀಯ) ಸ್ಥಾನ ಪಡೆದರು.

ರೂ. ೧೦ ಸಾವಿರ, ರೂ. ೭ ಸಾವಿರ ಮತ್ತು ರೂ. ೫ ಸಾವಿರ ನಗದು, ಟ್ರೋಫಿ, ತಲಾ ಒಂದು ಗ್ರಾಂ. ಚಿನ್ನದ ನಾಣ್ಯದೊಂದಿಗೆ ಪ್ರಶಸ್ತಿ ಪತ್ರವನ್ನು ಪ್ರಥಮ, ದ್ವಿತೀಯ ಮತ್ತು ತೃತೀಯ ವಿಜೇತರಿಗೆ ನೀಡಲಾಯಿತು.

ಕಾರ್ಯಕ್ರಮವನ್ನು ಮರೆನಾಡ್ ಶೂರ‍್ಸ್ ಕ್ಲಬ್‌ನ ಅಧ್ಯಕ್ಷ ಕುಪುö್ಪಡೀರ ಪೊನ್ನುಮುತ್ತಪ್ಪ, ಕಾರ್ಯದರ್ಶಿ ನೆಲ್ಲೀರ ಧನು, ಖಜಾಂಚಿ ಕಳ್ಳಂಗಡ ನವೀನ್‌ಚಂಗಪ್ಪ, ಸದಸ್ಯರುಗಳಾದ ಚೋನಿರ ಸಜನ್‌ಉತ್ತಪ್ಪ, ಚೋನಿರ ಸೋಮಣ್ಣ, ಬಲ್ಯಮೀದೇರಿರ ಶರೀನ್‌ಬೆಳ್ಯಪ್ಪ, ಕಾಯಪಂಡ ಮೋಹನ್, ಕುಪುö್ಪಡಿರ ಪ್ರಖ್ಯಾತ್‌ಚಿಣ್ಣಪ್ಪ, ಕುಪ್ಪಣಮಾಡ ಮಂಜು, ನೆಲ್ಲೀರ ರಾಕೇಶ್, ಕಾಳಿಮಾಡ ಶರತ್‌ಮುತ್ತಪ್ಪ, ಕರ್ತಮಾಡ ಸುಜನ್, ಚೇರಂಡ ಪಾಪುಕಾರ್ಯಪ್ಪ ಆಯೋಜಿಸಿದ್ದರು.