ಮಡಿಕೇರಿ, ಏ. ೭: ಕರ್ನಾಟಕ ರಾಜ್ಯ ಲಗೋರಿ ಅಸೋಸಿಯೇಶನ್ ನೂತನ ಅಧ್ಯಕ್ಷರಾಗಿ ದೊಡ್ಡಣ್ಣ ಬರಮೇಲು ಆಯ್ಕೆಯಾಗಿದ್ದಾರೆ. ಆಧುನಿಕ ಲಗೋರಿಯ ಜನಕ ಎಂದೇ ಖ್ಯಾತರಾಗಿರುವ ದೊಡ್ಡಣ್ಣ ಬರೆಮೇಲು ಪೆರಾಜೆ ಗ್ರಾಮದ ಜ್ಯೋತಿ ಹೈಸ್ಕೂಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ರಾಜ್ಯದ ಕ್ರೀಡಾ ಸಚಿವ ಕೆ.ಸಿ. ನಾರಾಯಣ ಗೌಡ ಮಹಾಪೋಷಕರಾಗಿ ಹಾಗೂ ಗೌರವಾಧ್ಯಕ್ಷರಾಗಿ ಸಚಿವ ಎಸ್. ಅಂಗಾರ ಕಾರ್ಯನಿರ್ವಹಿಸಲಿದ್ದಾರೆ.

ಸಂಘದ ಸಂಘಟನಾ ಕಾರ್ಯದರ್ಶಿಯಾಗಿ ಮಡಿಕೇರಿ ತಾಲೂಕಿನ ದೈಹಿಕ ಶಿಕ್ಷಣ ಅಧಿಕಾರಿ ಎಸ್.ಟಿ. ವೆಂಕಟೇಶ್, ರಾಜ್ಯ ಮಾಧ್ಯಮ ಸಂಚಾಲಕರಾಗಿ ಅನಿಲ್ ಎಚ್.ಟಿ., ನಿರ್ದೇಶಕರುಗಳಾಗಿ ಜಿಲ್ಲೆಯ ಸದಾಶಿವಯ್ಯ ಪಲ್ಲೇದ, ದೇಚಮ್ಮ ಅವರುಗಳು ಆಯ್ಕೆಯಾಗಿದ್ದಾರೆ.