ಕಡಂಗ, ಏ. ೪: ಕಳೆದ ಸೋಮವಾರ ಮೃತಪಟ್ಟ ಕರ್ನಾಟಕ ಮುಸ್ಲಿಂ ಜಮಾಅತ್ ನಾಯಕರು ಕೊಡಗು ಮರ್ಕಝುಲ್ ಹಿದಾಯ ಕೋಶಾಧಿಕಾರಿಯೂ ಕೊಟ್ಟಮುಡಿ ಜಮಾಅತ್ ಅಧ್ಯಕ್ಷರು ಆಗಿದ್ದ ಕೆ.ಎ. ಹಾರಿಸ್ ಅವರ ಅನುಸ್ಮರಣಾ ಸಂಗಮಕ್ಕೆ ಇಂಡಿಯನ್ ಗ್ರಾಂಡ್ ಮುಫ್ತಿ ಜಿಲ್ಲಾ ಸಂಯುಕ್ತ ಖಾಝಿಗಳು ಆದ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ನೇತೃತ್ವ ನೀಡಿದರು.

ಜುಮಾ ನಮಾಝ್ ಬಳಿಕ ಕೊಟ್ಟಮುಡಿ ಹಳೇ ಜುಮಾ ಮಸೀದಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಮಹ್ಮದ್ ಉಸ್ತಾದ್ ಎಡಪಾಲ, ಕರ್ನಾಟಕ ಮುಸ್ಲಿಂ ಜಮಾಅತ್ ಜಿಲ್ಲಾಧ್ಯಕ್ಷ ಸಯ್ಯಿದ್ ಶಿಹಾಬುದ್ದೀನ್ ಅಲ್ ಹೈದ್ರೋಸಿ ಕಿಲ್ಲೂರ್, ಎಸ್.ವೈ.ಎಸ್. ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಎಂ.ಎಸ್.ಎA. ಝೈನಿ ಸಖಾಫಿ ಕಕ್ಕಿಂಜೆ, ಮರ್ಕಝುಲ್ ಹಿದಾಯ ಪ್ರಧಾನ ವ್ಯವಸ್ಥಾಪಕ ಇಸ್ಮಾಯಿಲ್ ಸಖಾಫಿ ಕೊಂಡAಗೇರಿ ಅನುಸ್ಮರಣಾ ಭಾಷ ಣ ನಡೆಸಿದರು.

ಪ್ರಾಸ್ತಾವಿಕವಾಗಿ ಎ.ಪಿ. ಉಸ್ತಾದ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಕೂರ್ಗ್ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ ಉಸ್ತಾದ್, ಉಪಾಧ್ಯಕ್ಷ ಶಾದುಲಿ ಫೈಝಿ, ಯು.ಎ.ಇ. ರಾಷ್ಟಿçÃಯ ಅಧ್ಯಕ್ಷ ಅಬೂಬಕರ್ ಹಾಜಿ, ಕರ್ನಾಟಕ ಮುಸ್ಲಿಂ ಜಮಾಅತ್ ಜಿಲ್ಲಾ ಕಾರ್ಯಾಧ್ಯಕ್ಷ ಯೂಸುಫ್ ಮತ್ತಿತರರು ಪಾಲ್ಗೊಂಡಿದ್ದರು.