ಕೂಡಿಗೆ, ಮಾ. ೨೭: ದಾವಣಗೆರೆಯಲ್ಲಿ ನಡೆದ ರಾಜ್ಯಮಟ್ಟದ ಶಿಕ್ಷಕರ ಶೈಕ್ಷಣಿಕ ಸಮಾವೇಶದಲ್ಲಿ ಕೂಡಿಗೆ ಸದ್ಗುರು ಅಪ್ಪಯ್ಯ ಸ್ವಾಮಿ ಪ್ರೌಢಶಾಲೆಯ ಗಣಿತ ಮತ್ತು ವಿಜ್ಞಾನ ಶಿಕ್ಷಕ ಸಿ. ದುರ್ಗೇಶ್ ಅವರು ರಾಜ್ಯ ಮಟ್ಟದ ಜ್ಞಾನ ಸಿಂಧು ಪ್ರಶಸ್ತಿ ಪಡೆದಿದ್ದಾರೆ. ದುರ್ಗೇಶ್ ಗಣಿತ ವಿಷಯದಲ್ಲಿ ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.