ಶನಿವಾರಸಂತೆ, ಮಾ. ೨೭: ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕ್ಯಾತನಹಳ್ಳಿ ಗ್ರಾಮದಲ್ಲಿ ಸುಮಾರು ೧.೩೦ ಎಕರೆ ಕಾಫಿ ಹಾಗೂ ಮೆಣಸು ತೋಟಕ್ಕೆ ಆಕಸ್ಮಿಕ ಬೆಂಕಿ ತಗುಲಿದ್ದು, ಗಿಡ- ಬಳ್ಳಿಗಳು ಸುಟ್ಟು ಹೋಗಿವೆ. ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕ್ಯಾತನಹಳ್ಳಿ ಗ್ರಾಮದ ನಿವಾಸಿ ಕೆ.ಎಸ್. ನಾಗರಾಜ ಎಂಬವರ ಕಾಫಿ ತೋಟಕ್ಕೆ ಆಕಸ್ಮಿಕ ಬೆಂಕಿ ತಗುಲಿದ್ದು, ಕಾಫಿ ಹಾಗೂ ಮೆಣಸು ತೋಟಗಳು ಶೇ. ೭೦ರಿಂದ ೮೦ರಷ್ಟು ಭಸ್ಮಗೊಂಡಿದೆ. ಸೋಮವಾರಪೇಟೆ ಅಗ್ನಿ ಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ.ಈ ಜಾಗದಲ್ಲಿ ಕಾಫಿ, ಮೆಣಸು ಬೆಳೆಗಳಿಂದ ವರ್ಷಕ್ಕೆ ಅಂದಾಜು ರೂ. ೫ ಲಕ್ಷದಿಂದ ೬ ಲಕ್ಷಗಳಷ್ಟು ಆದಾಯ ಬರುತ್ತಿತ್ತು ಎನ್ನಲಾಗಿದ್ದು, ಈ ಬಗ್ಗೆ ಶನಿವಾರಸಂತೆ ಪೊಲೀಸ್ ಠಾಣೆಗೆ ದೂರು ನೀಡಲಾಗಿ ಸ್ಥಳಕ್ಕೆ ಠಾಣಾಧಿಕಾರಿ ಹೆಚ್.ಇ. ದೇವರಾಜ್, ಸಹಾಯಕ ಠಾಣಾಧಿಕಾರಿ ಚನ್ನಯ್ಯ ಭೇಟಿ ನೀಡಿ ಪ್ರಕರಣ ದಾಖಲಿಸಿರುತ್ತಾರೆ.