ಕುಶಾಲನಗರ, ಮಾ.೨೧: ಕಳೆದ ೩ ವರ್ಷಗಳ ಅವಧಿಯಲ್ಲಿ ನದಿ ಪ್ರವಾಹದಿಂದ ತತ್ತರಗೊಂಡಿರುವ ಸಮೀಪದ ಮಾದಾಪಟ್ಟಣ ವ್ಯಾಪ್ತಿಯ ನದಿ ತೀರದ ನಿವಾಸಿಗಳು ಆ ಭಾಗದ ನದಿಯ ನಿರ್ವಹಣೆ ಕಾಮಗಾರಿ ನಡೆಸಲು ಕ್ರಮಕೈಗೊಳ್ಳುವಂತೆ ಕ್ಷೇತ್ರದ ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಅವರ ಮೂಲಕ ಮನವಿ ಮಾಡಿದ್ದಾರೆ.

ಗುಡ್ಡೆಹೊಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಸರಕಾರಿ ಪಾಲಿಟೆಕ್ನಿಕ್ ಕಾಲೇಜು ಮುಂಭಾಗ ದಲ್ಲಿ ಹರಿಯುವ ಕಾವೇರಿ ನದಿಯಲ್ಲಿ ಕಳೆದ ಹಲವು ವರ್ಷಗಳಿಂದ ಮಣ್ಣು, ಗಿಡ ಗಂಟಿಗಳು ತುಂಬಿ ನೀರಿನ ಹರಿವಿಗೆ ಅಡ್ಡಿಉಂಟಾಗುತ್ತಿದೆ. ಇದರಿಂದ ನದಿ ನೀರು ನೂರಾರು ಮನೆಗಳಿಗೆ ನುಗ್ಗಿ ಆಸ್ತಿಪಾಸ್ತಿಗಳಿಗೆ ಹಾನಿ ಉಂಟಾಗಿದೆ. ನದಿ ನೀರು ಹೆದ್ದಾರಿಯಲ್ಲಿ ಹರಿದು ವಾಹನಗಳ ಸಂಚಾರಕ್ಕೆ ಕೂಡ ಸಮಸ್ಯೆ ಉಂಟಾಗುತ್ತದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.ಈ ಸಂಬAಧ ಪರಿಶೀಲನೆ ನಡೆಸಿ ನದಿ ಹೂಳೆತ್ತುವ ಕೆಲಸ ಮಾಡಿ ನದಿಯ ನಿರ್ವಹಣೆ ಕಾಮಗಾರಿ ನಡೆಸುವಂತೆ ಶಾಸಕರಲ್ಲಿ ಮನವಿ ಮಾಡಿದ್ದಾರೆ. ನದಿ ತಟದ ನಾಗರಿಕರ ಬವಣೆ ಶಾಶ್ವತವಾಗಿ ನೀಗಿಸುವಂತೆ ಕೋರಿದ್ದಾರೆ.