ಶನಿವಾರಸಂತೆ, ಮಾ. ೨೧: ಶನಿವಾರಸಂತೆ ಹೋಬಳಿಯ ಬಡಬನಹಳ್ಳಿಯ ನಿವಾಸಿ, ಕೂಲಿ ಕಾರ್ಮಿಕ ಪ್ರವೀಣ್ ಕುಮಾರ್ ಫೆ. ೨೫ರಂದು ಬೈಕ್ನಲ್ಲಿ (ಕೆಎ-೦೫, ಇಎನ್-೫೭೬೫) ನಂದಿಗುAದ ಗ್ರಾಮಕ್ಕೆ ತೆರಳುತ್ತಿದ್ದಾಗ ಹೊನ್ನೆಕೊಪ್ಪಲು ಸಾರ್ವಜನಿಕ ರಸ್ತೆಯ ತಿರುವಿನಲ್ಲಿ ಬೈಕ್ಗೆ ಡಿಕ್ಕಿ ಹೊಡೆದು ಪರಾರಿ ಯಾಗಿದ್ದ ವಾಹನ (ಕೆಎ-೧೭, ಎಂ-೪೩೭೦)ವನ್ನು ಶನಿವಾರಸಂತೆ ಪೊಲೀಸರು ತಾ. ೧೯ರಂದು ವಶಪಡಿಸಿಕೊಂಡಿದ್ದರು.
ಬೈಕ್ ಚಾಲಕ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಡಿಕ್ಕಿ ಪಡಿಸಿದ ವಾಹನ ಚಾಲಕ ಶ್ರೀನಿವಾಸ್ ಎಂಬಾತ ತಲೆಮರೆಸಿಕೊಂಡಿದ್ದಾನೆ.