ಸುಂಟಿಕೊಪ್ಪ, ಮಾ. ೨೧: ಸಮೀಪದ ಐಗೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಯಡವಾರೆ ಗ್ರಾಮದ ಡಿ. ಹೆಚ್. ವಿಶ್ವನಾಥ್ ರಾಜ್ ಅರಸ್ ಆಯ್ಕೆಯಾಗಿದ್ದಾರೆ ಹಾಲಿ ಅಧ್ಯಕ್ಷರಾಗಿದ್ದ ತಾಕೇರಿಯ ಬೋಪಯ್ಯ ಅವರ ನಿಧನದಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ತಾ. ೧೯ ರಂದು ಬ್ಯಾಂಕಿನ ಸಭಾಂಗಣದಲ್ಲಿ ಚುನಾವಣೆ ನಡೆಯಿತು.

ಬಿಜೆಪಿ ಬೆಂಬಲಿತರಾದ ಡಿ.ಹೆಚ್. ವಿಶ್ವನಾಥ್ ಹಾಗೂ ಬಿಜೆಪಿ ಅಧಿಕೃತ ಅಭ್ಯರ್ಥಿ ಕಿರಗಂದೂರಿನ ಹೆಚ್.ಬಿ. ಶಿವಕುಮಾರ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. ವಿಶ್ವನಾಥ ಅವರಿಗೆ ೬ ಮತ, ಶಿವಕುಮಾರ್ ಅವರಿಗೆ ೫ ಮತಗಳು ಲಭ್ಯವಾಯಿತು. ಚುನಾವಣಾಧಿಕಾರಿ ಡಿ.ಹೆಚ್. ವಿಶ್ವನಾಥ್ ಅವರನ್ನು ಅಧ್ಯಕ್ಷರೆಂದು ಘೋಷಿಸಿದರು. ಡಿ.ಹೆಚ್. ವಿಶ್ವನಾಥ್ ಅರಸು ಅವರು ಐಗೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಸ್ಥಾಪಕ ಅಧ್ಯಕ್ಷ ೨೦ ವರ್ಷಗಳ ಕಾಲ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ದಿವಂಗತ ದಳವಾಯಿ ಹನುಮರಾಜ ಅರಸು ಅವರ ಪುತ್ರರಾಗಿರುತ್ತಾರೆ.