ಮಡಿಕೇರಿ, ಮಾ. ೮ : ನಗರದ ಜನರಲ್ ತಿಮ್ಮಯ್ಯ ರಸ್ತೆಯಲ್ಲಿರುವ ಸಿ.ಎಸ್.ಐ ಶಾಂತಿ ಚರ್ಚ್ನ ೧೫೦ ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ತಾ.೭ ರಂದು ನಡೆಯಿತು. ಕರ್ನಾಟಕ ದಕ್ಷಿಣ ಪ್ರಾಂತ್ಯದ ಧರ್ಮಾಧ್ಯಕ್ಷ ರೈಟ್ ರೆವೆ|| ಮೋಹನ್ ಮನೋರಾಜ್ ಅವರು ಶತಮಾನೋತ್ತರ ಸುವರ್ಣ ಮಹೋತ್ಸವದ ಲಾಂಛನವನ್ನು ಬಿಡುಗಡೆ ಮಾಡಿ ಮಹೋತ್ಸವದ ಉದ್ಘಾಟನೆ ನೆರವೇರಿಸಿ ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ಡಯಾಸಿಸ್‌ನ ಕಾರ್ಯದರ್ಶಿ ವಿಲಿಯಂಕೇರಿ, ಖಜಾಂಜಿ ವಿನ್ಸೆಂಟ್ ಪಾಲಣ್ಣ ಹಾಗೂ ಇತರರು ಹಾಜರಿದ್ದರು. ರೆವೆ|| ಅಮೃತ್‌ರಾಜ್ ಕೋಡೆ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಎಸ್.ಜಯಕುಮಾರ್ ಅವರು ಶಾಂತಿ ದೇವಾಲಯದ ಹಿನ್ನೆಲೆ ಮತ್ತು ಚರಿತ್ರೆಯನ್ನು ವಿವರಿಸಿದರು. ಸುಸನ್ನ ಜೇಮ್ಸ್ ಅವರಿಂದ ವಂದನಾರ್ಪಣೆ ನಡೆಯಿತು.