ಮಡಿಕೇರಿ, ಮಾ. ೮: ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಕ್ರೀಡಾ ಸಮಿತಿ ವತಿಯಿಂದ ಮಡಿಕೇರಿ ನಗರದ ಪತ್ರಕರ್ತರಿಗೆ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ‘ಮಡಿಕೇರಿ ಮೀಡಿಯ ಕ್ರಿಕೆಟ್ ಕಪ್’ನಲ್ಲಿ ‘ಟೀಂ ಸರ್ಜಿಕಲ್’ ತಂಡ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು.

ಪಂದ್ಯಾಟದಲ್ಲಿ ಅನು ಕಾರ್ಯಪ್ಪ ಮಾಲೀಕತ್ವದ, ದಿವಾಕರ್ ಜಾಕಿ ನಾಯಕತ್ವದ ಟೀಂ ಸರ್ಜಿಕಲ್, ರಾಕೇಶ್ ಮಾಲೀಕತ್ವದ ನವೀನ್ ಡಿಸೋಜಾ ನಾಯಕತ್ವದ ರಾಯಲ್ ಚಾಲೆಂರ‍್ಸ್ ಮಡಿಕೇರಿ, ಸಂತೋಷ್ ರೈ ಮಾಲೀಕತ್ವದ ರಿಜ್ವಾನ್ ನಾಯಕತ್ವದ ರಾಯಲ್ ಸ್ಟೆçöÊರ‍್ಸ್ ತಂಡ ಪಾಲ್ಗೊಂಡಿತ್ತು. ಲೀಗ್ ಮಾದರಿಯಲ್ಲಿ ನಡೆದ ಪಂದ್ಯದಲ್ಲಿ ಟೀಂ ಸರ್ಜಿಕಲ್ ಮತ್ತು ರಾಯಲ್ ಚಾಲೆಂರ‍್ಸ್ ಮಡಿಕೇರಿ ತಂಡ ಫೈನಲ್ ಪ್ರವೇಶಿಸಿತು.

ಫೈನಲ್ ಪಂದ್ಯಾಟದಲ್ಲಿ ಟೀಂ ಸರ್ಜಿಕಲ್ ತಂಡ ನಿಗದಿತ ೮ ಓವರ್‌ನಲ್ಲಿ ೨ ವಿಕೆಟ್ ಕಳೆದುಕೊಂಡು ೧೨೫ ರನ್ ಕಲೆ ಹಾಕಿತು. ತಂಡದ ಪರ ಕೆ.ಎ. ಆದಿತ್ಯ ೩೪, ಆದರ್ಶ್ ಅದ್ಕಲೇಗಾರ್ ೫೨ ರನ್ ದಾಖಲಿಸಿದರು. ಗುರಿಬೆನ್ನತ್ತಿದ ರಾಯಲ್ ಚಾಲೆಂರ‍್ಸ್ ಮಡಿಕೇರಿ ತಂಡ ೪ ವಿಕೆಟ್ ಕಳೆದುಕೊಂಡು ೧೧೫ ರನ್ ದಾಖಲಿಸಿ ಪರಾಭವಗೊಂಡು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಇದಕ್ಕೂ ಮೊದಲು ನಡೆದ ಲೀಗ್ ಹಂತದ ಮೊದಲ ಪಂದ್ಯದಲ್ಲಿ ರಾಯಲ್ ಸ್ಟೆçöÊರ‍್ಸ್ ತಂಡ ನಿಗದಿತ ೮ ಓವರ್‌ನಲ್ಲಿ ೬ ವಿಕೆಟ್ ಕಳೆದುಕೊಂಡು ೮೨ ರನ್ ಪೇರಿಸಿತು. ಗುರಿ ಬೆನ್ನತ್ತಿದ ಟೀಂ ಸರ್ಜಿಕಲ್ ತಂಡ ೭ ಓವರ್‌ಗಳಲ್ಲಿ ೧ ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು.

ಎರಡನೇ ಪಂದ್ಯದಲ್ಲಿ ರಾಯಲ್ ಸ್ಟೆçöÊರ‍್ಸ್ ತಂಡ ನಿಗದಿತ ೮ ಓವರ್‌ನಲ್ಲಿ ೬ ವಿಕೆಟ್ ಕಳೆದುಕೊಂಡು ೮೪ ರನ್ ಕಲೆ ಹಾಕಿತು. ಗುರಿ ಬೆನ್ನತ್ತಿದ ರಾಯಲ್ ಚಾಲೆಂರ‍್ಸ್ ಮಡಿಕೇರಿ ತಂಡ ೫.೨ ಓವರ್‌ನಲ್ಲಿ ೧ ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು. ಮೂರನೇ ಪಂದ್ಯದಲ್ಲಿ ಟೀಂ ಸರ್ಜಿಕಲ್ ತಂಡ ನಿಗದಿತ ೮ ಓವರ್‌ನಲ್ಲಿ ೬ ವಿಕೆಟ್ ನಷ್ಟಕ್ಕೆ ೫೯ ರನ್ ಕಲೆ ಹಾಕಿತು. ಗುರಿಬೆನ್ನತ್ತಿದ ರಾಯಲ್ ಚಾಲೆಂರ‍್ಸ್ ಮಡಿಕೇರಿ ತಂಡ ೪.೧ ಓವರ್‌ನಲ್ಲಿ ಜಯಗಳಿಸಿತು.

ಫೈನಲ್ ಪಂದ್ಯಾಟದಲ್ಲಿ ಟೀಂ ಸರ್ಜಿಕಲ್ ತಂಡದ ಪರ ಆದರ್ಶ್ ಅದ್ಕಲೇಗಾರ್ ೧೫ ಎಸೆತದಲ್ಲಿ ೫೨ರನ್ ಕಲೆ ಹಾಕಿದರೆ, ರಾಯಲ್ ಚಾಲೆಂರ‍್ಸ್ ಮಡಿಕೇರಿ ತಂಡದ ಪರ ಪ್ರೇಮ್ ಕುಮಾರ್ ೩೪ ಎಸೆತದಲ್ಲಿ ೭೦ ರನ್ ಕಲೆ ಹಾಕಿದರು. ಲೀಗ್ ಪಂದ್ಯಾಟದಲ್ಲಿ ಟೀಂ ಸರ್ಜಿಕಲ್ ತಂಡದ ಕೆ.ಎ.ಆದಿತ್ಯ ರಾಯಲ್ ಸ್ಟೆçöÊರ‍್ಸ್ ತಂಡದ ವಿರುದ್ಧ ೨೧ ಎಸೆತದಲ್ಲಿ ೬೩ ರನ್ ದಾಖಲಿಸಿದರೆ, ರಾಯಲ್ ಚಾಲೆಂರ‍್ಸ್ ಮಡಿಕೇರಿ ತಂಡದ ಲೋಕೇಶ್ ಕಾಟಕೇರಿ ರಾಯಲ್ ಸ್ಟೆçöÊರ‍್ಸ್ ತಂಡದ ವಿರುದ್ಧ ೧೮ ಎಸೆತದಲ್ಲಿ ೫೨ ರನ್ ದಾಖಲಿಸಿದರು.

ವೈಯುಕ್ತಿಕ ಪ್ರಶಸ್ತಿ: ಬೆಸ್ಟ್ ವುಮೆನ್ ಪ್ಲೇಯರ್ ಮತ್ತು ಫೈನಲ್ ಪಂದ್ಯಾಟದ ಬೆಸ್ಟ್ ಬೌಲರ್ ಪ್ರಶಸ್ತಿ-ಟೀಂ ಸರ್ಜಿಕಲ್ ತಂಡದ ಚಿತ್ರ ನಾಣಯ್ಯ, ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ- ಟೀಂ ಸರ್ಜಿಕಲ್ ತಂಡದ ಆದರ್ಶ್ ಅದ್ಕಲೇಗಾರ್, ಮ್ಯಾನ್ ಆಫ್ ದಿ ಸೀರಿಸ್ ಪ್ರಶಸ್ತಿ- ಟೀಂ ಸರ್ಜಿಕಲ್ ತಂಡದ ಕೆ.ಎ.ಆದಿತ್ಯ, ಬೆಸ್ಟ್ ಬೌಲರ್ ಪ್ರಶಸ್ತಿ- ಟೀಂ ಸರ್ಜಿಕಲ್ ತಂಡದ ದಿವಾಕರ್ (ಜಾಕಿ), ಹಿರಿಯ ಆಟಗಾರ ಪ್ರಶಸ್ತಿ-ಟೀಂ ಸರ್ಜಿಕಲ್ ತಂಡದ ಬಿ.ಸಿ.ದಿನೇಶ್, ಬೆಸ್ಟ್ ಬ್ಯಾಟ್ಸ್ಮ್ಯಾನ್ ಪ್ರಶಸ್ತಿ-ರಾಯಲ್ ಚಾಲೆಂರ‍್ಸ್ ಮಡಿಕೇರಿ ತಂಡದ ಪ್ರೇಮ್ ಕುಮಾರ್, ಬೆಸ್ಟ್ ಕ್ಯಾಚರ್ ಪ್ರಶಸ್ತಿ-ರಾಯಲ್ ಚಾಲೆಂರ‍್ಸ್ ಮಡಿಕೇರಿ ತಂಡದ ವಿಶ್ಮಪೆಮ್ಮಯ್ಯ ಪಡೆದುಕೊಂಡರು.

ಪ್ರಶಸ್ತಿ ಪ್ರದಾನ ಸಮಾರಂಭ

ಕ್ರೀಡಾಕೂಟದ ಪ್ರಶಸ್ತಿ ಪ್ರದಾನ ಸಮಾರಂಭ ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭ ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕ್ ಮಾಜಿ ಅಧ್ಯಕ್ಷ ಬಿ.ಕೆ. ಜಗದೀಶ್, ತೀರ್ಪುಗಾರ ಕಾವೇರಪ್ಪ, ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಅನುಕಾರ್ಯಪ್ಪ, ಪ್ರೆಸ್‌ಕ್ಲಬ್ ಅಧ್ಯಕ್ಷ ಎ.ಆರ್. ಕುಟ್ಟಪ್ಪ, ರಕ್ಷಣಾ ವೇದಿಕೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರಶ್ಮಿಶೆಟ್ಟಿ ಇದ್ದರು. ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದ ಟೀಂ ಸರ್ಜಿಕಲ್ ತಂಡಕ್ಕೆ ೧೫,೦೦೦ ನಗದು ಮತ್ತು ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ರಾಯಲ್ ಚಾಲೆಂರ‍್ಸ್ ಮಡಿಕೇರಿ ತಂಡಕ್ಕೆ ೧೦,೦೦೦ ನಗದು ಮತ್ತು ಟ್ರೋಫಿಯನ್ನು ಗಣ್ಯರು ವಿತರಿಸಿದರು.