*ಗೋಣಿಕೊಪ್ಪ, ಫೆ. ೨೩: ಎರಡು ಜೀವಗಳ ಬಲಿಪಡೆದ ಹುಲಿ ಸೆರೆಗೆ ವಿಶೇಷ ತಂಡ ಕೂಂಬಿAಗ್ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದೆ. ಮಳೆಯ ಕಾರಣದಿಂದಾಗಿ ಹೆಜ್ಜೆ ಗುರುತು ಸಿಗುತ್ತಿಲ್ಲ ಎಂದು ಅರಣ್ಯ ಅಧಿಕಾರಿಗಳು ವರದಿ ನೀಡಿದ್ದಾರೆ ಎಂದು ಶಾಸಕ ಕೆ.ಜಿ. ಬೋಪಯ್ಯ ಮಾಹಿತಿ ನೀಡಿದ್ದಾರೆ.

ಶ್ರೀಮಂಗಲ ಸಮೀಪದ ಟಿ. ಶೆಟ್ಟಿಗೇರಿಯಲ್ಲಿ (ಮೊದಲ ಪುಟದಿಂದ) ಹುಲಿ ಸೆರೆಹಿಡಿಯಲು ವಿಶೇಷ ತಂಡ ಬೀಡುಬಿಟ್ಟಿರುವ ಸ್ಥಳಕ್ಕೆ ಭೇಟಿ ನೀಡಿ ಶೀಘ್ರವಾಗಿ ಹುಲಿ ಹಿಡಿಯಲು ಕ್ರಮ ಕೈಗೊಳ್ಳಲು ಶಾಸಕರು ಜಿಲ್ಲಾ ಪ್ರಧಾನ ಅರಣ್ಯಾಧಿಕಾರಿ ಹೀರಾಲಾಲ್ ಅವರಿಗೆ ಸೂಚಿಸಿದರು.

ಈ ಸಂದರ್ಭ ಅರಣ್ಯಾ ಧಿಕಾರಿಗಳು ಮಳೆಯಿಂದ ಹೆಜ್ಜೆ ಗುರುತು ಕಂಡುಹಿಡಿಯಲು ಸಾಧ್ಯವಾಗುತ್ತಿಲ್ಲ. ಅತೀ ಶೀಘ್ರದಲ್ಲಿ ಹುಲಿಯನ್ನು ಹಿಡಿಯಲಾಗುವುದು ಎಂದು ತಿಳಿಸಿದರು.

ಮಹಾಶಕ್ತಿ ಕೇಂದ್ರದ ಪ್ರಮುಖ್ ಮಚ್ಚಮಾಡ ಮುರುಳಿ, ತಾಲೂಕು ಕೃಷಿ ಮೋರ್ಚಾ ಅಧ್ಯಕ್ಷ ಕಟ್ಟೇರ ಈಶ್ವರ, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧುದೇವಯ್ಯ, ಅರಣ್ಯಾಧಿಕಾರಿಗಳು ಹಾಜರಿದ್ದರು. -ಎನ್.ಎನ್. ದಿನೇಶ್