ಪೆರಾಜೆ, ಫೆ. ೨೩: ಜಿಲ್ಲೆಯ ವೀರಾ ಜಪೇಟೆ ವಿಧಾನಸಭಾ ಕ್ಷೇತ್ರದ ೨೨ ಗ್ರಾಮಗಳನ್ನೊಳಗೊಂಡ ಹೆಚ್ಚುವರಿ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಗೆ ಅಧ್ಯಕ್ಷರಾಗಿ ನಾಗೇಶ್ ಕುಂದಲ್ಪಾಡಿ ಅವರನ್ನು ಸರ್ಕಾರ (ಮೊದಲ ಪುಟದಿಂದ) ನೇಮಕ ಮಾಡಿ ಆದೇಶಿಸಿದೆ. ಪ್ರಸ್ತುತ ಇವರು ಮಡಿಕೇರಿ ತಾಲೂಕು ಪಂಚಾಯತ್ ಸದಸ್ಯರಾಗಿ, ಪೆರಾಜೆ ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷರಾಗಿ, ಕೊಡಗು ಜಿಲ್ಲಾ ಬಿಜೆಪಿ ಕೃಷಿ ಮೋರ್ಚದ ಅಧ್ಯಕ್ಷರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.ಇದುವರೆಗೆ ಅಧ್ಯಕ್ಷರಾಗಿದ್ದ ಶಾಂತೆಯAಡ ರವಿಕುಶಾಲಪ್ಪ ಅವರ ಸ್ಥಾನವನ್ನು ಮಾರ್ಪಡಿಸಿ ನಾಗೇಶ್ ಕುಂದಲ್ಪಾಡಿ ಅವರನ್ನು ನೇಮಕ ಮಾಡಲಾಗಿದೆ. ರವಿಕುಶಾಲಪ್ಪ ಅವರು ಕರ್ನಾಟಕ ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷರಾಗಿದ್ದಾರೆ.