*ಗೋಣಿಕೊಪ್ಪ, ಫೆ. ೧೩: ಕನ್ನಡ ಹಾಗೂ ಕೊಡವ ಭಾಷೆಯಲ್ಲಿ ಸಾಹಿತ್ಯದ ಕೃಷಿ ಮಾಡಿದ ಹಿರಿಯ ಸಾಹಿತಿ ಚುಟುಕು ರತ್ನ ಕೇಚಮಾಡ ಸುಬ್ಬಮ್ಮ ತಿಮ್ಮಯ್ಯ (೯೧) ಅವರು ತಾ. ೧೩ರಂದು ದೈವಾದೀನರಾಗಿದ್ದಾರೆ.

ಮೂಲತಃ ಕಾನೂರು ಗ್ರಾಮದ ನಿವಾಸಿ, ನಿವೃತ್ತ ಶಿಕ್ಷಕಿ ಆಗಿದ್ದ ಇವರು ಪೊನ್ನಂಪೇಟೆಯಲ್ಲಿ ನಡೆದ ೧೨ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವ ಅಧ್ಯಕ್ಷರಾಗಿ ಸಾಹಿತ್ಯದ ರಥವನ್ನು ಎಳೆದಿದ್ದರು. ಇವರು ಕನ್ನಡ ಮತ್ತು ಕೊಡವ ಭಾಷೆಯಲ್ಲಿ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡು ಹಲವು ಕೃತಿಗಳನ್ನು ರಚಿಸಿದ್ದಾರೆ. ಕನ್ನಡದಲ್ಲಿ ಭಾವನೆಯಲ್ಲರಳಿದ ಪುಷ್ಪದೆಸಳುಗಳು,