ಮಡಿಕೇರಿ, ಫೆ. ೧೩: ಹೊದ್ದೂರು ಗ್ರಾಮದ ಐತಿಹಾಸಿಕ ಹಿನ್ನೆಲೆಯುಳ್ಳ ಶ್ರೀಶಾಸ್ತ ಈಶ್ವರ ದೇವಾಲಯದ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ತಾ. ೧೨ ರಂದು ಬ್ರಹ್ಮಶ್ರೀ ತಳಿಪರಂಬು ಪುದುಚೇರಿಯ ಶಂಕರನ್ ನಂಬೂದರಿ ಮಾರ್ಗದರ್ಶನದಲ್ಲಿ ಪೂಜಾ ವಿಧಿವಿಧಾನ ಹಾಗೂ ಧಾರ್ಮಿಕ ಕಾರ್ಯ ನಡೆದವು .

ತಂತ್ರಿಗಳಿAದ ಗಣಪತಿ ಹೋಮ, ಅಘೋರ ಹೋಮ, ಮೃತ್ಯುಂಜಯ ಹೋಮ ಹಾಗೂ ಸುದರ್ಶನ ಹೋಮ ಸೇರಿದಂತೆ ಪ್ರಾತಃಕಾಲ ೬:೦೦ ಗಂಟೆಯಿAದ ರಾತ್ರಿ ೧೧ ಗಂಟೆವರೆಗೆ ವಿವಿಧ ಪೂಜಾ ಕೈಂಕರ್ಯಗಳು ದೇವಾಲಯ ಸಮಿತಿ ಅಧ್ಯಕ್ಷ ಕೂಡಂಡ ರಾಜೇಂದ್ರ ಅಯ್ಯಮ್ಮ ಅವರ ಸಮ್ಮುಖದಲ್ಲಿ ನಡೆಯಿತು. ಗ್ರಾಮಸ್ಥರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.