, ಜ. ೮: ನಗರದ ಸುಂಕದಕಟ್ಟೆಯ ಅಯೋಧ್ಯ ಫ್ರೆಂಡ್ಸ್ ಕ್ಲಬ್ ವತಿಯಿಂದ ಪ್ರಥಮ ವರ್ಷದ ಕಾಲ್ಚೆಂಡು ಪಂದ್ಯಾಟಕ್ಕೆ ಚಾಲನೆ ನೀಡಲಾಯಿತು. ಪಂಪ್ ಕೆರೆಯ ಸಮೀಪದ ಮೈದಾನದಲ್ಲಿ ಆಯೋಜಿಸಿದ್ದ ಪಂದ್ಯಾಟವನ್ನು ನಗರ ಬಿಜೆಪಿ ಅಧ್ಯಕ್ಷ ಟಿ.ಪಿ. ಕೃಷ್ಣ ಉದ್ಘಾಟಿಸಿದರು.

ಬ್ಲೂ ಸ್ಟಾರ್ ಪುಟ್ಬಾಲ್ ಕ್ಲಬ್ ಮಾಜಿ ಆಟಗಾರರಾದ ಅಣ್ಣಯ್ಯ, ಮರ್ವಿನ್ ಲೋಬೋ ಮತ್ತು ಆರ್ಜಿ ಪಂಚಾಯಿತಿ ಸದಸ್ಯ ಕೆ.ಎನ್. ಉಪೇಂದ್ರ, ತಾಲೂಕು ಪಂಚಾಯಿತಿ ಸದಸ್ಯರಾದ ಬಿ.ಎಂ. ಗಣೇಶ್, ಆನಂದ್ ಎಂ.ಎ., ಕಾಫಿ ಬೆಳೆಗಾರ ಮಂಡೇಡ ಜೀವನ್ ಸೇರಿದಂತೆ ಇನ್ನಿತರರು ಇದ್ದರು.

ಪ್ರಥಮ ಪಂದ್ಯಾಟ ಅತಿಥೇಯ ಅಯೋಧ್ಯ ಫ್ರೆಂಡ್ಸ್ ಮತ್ತು ವೀರಾಜಪೇಟೆ ಫ್ರೆಂಡ್ ತಂಡಗಳ ನಡುವೆ ನಡೆಯಿತು. ೩-೧ ಗೋಲುಗಳಿಂದ ಅಯೋಧ್ಯ ಫ್ರೆಂಡ್ಸ್ ತಂಡವು ಗೆಲುವು ಸಾಧಿಸಿತು. ಪಂದ್ಯಾಟದಲ್ಲಿ ಒಟ್ಟು ೩೫ ತಂಡಗಳು ಸೆಣಸುತ್ತಿದ್ದು, ತಾ. ೧೦ರಂದು ಫೈನಲ್ ಪಂದ್ಯಾಟ ನಡೆಯಲಿದೆ.