ಮಡಿಕೇರಿ, ಡಿ. ೩೦: ಮೂಲತಃ ಶಾಂತಳ್ಳಿಯವರಾದ ಇದೀಗ ಮೈಸೂರಿನ ಮೀನುಗಾರಿಕಾ ಇಲಾಖೆಯ ಹಿರಿಯ ನಿರ್ದೇಶಕರಾಗಿರುವ ಕುಮಾರಸ್ವಾಮಿ - ಸುಶೀಲಾ ದಂಪತಿಯ ಪುತ್ರ ಪೃಥ್ವಿರಾಜ್ ಎಸ್.ಕೆ. ಅವರಿಗೆ ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯ ಪಿ.ಎಚ್.ಡಿ ಪ್ರದಾನ ಮಾಡಿದೆ. ಹೆಸರುಕಾಳಿನ ಅನುವಂಶೀಯ ಸುಧಾರಣೆ ಹಾಗೂ ಹೆಸರುಕಾಳಿನ ನಂಜುರೋಗ ನಿರೋಧಕ ತಳಿಗಳನ್ನು ಅಭಿವೃದ್ಧಿಪಡಿಸಲು ಸಹಕಾರಿಯಾಗುವ ಸಂಶೋಧನೆಯನ್ನು ನಡೆಸಿದ್ದು ಈ ಸಂಬAಧ ಪಿ.ಎಚ್.ಡಿ. ದೊರೆತಿದೆ. ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ಡಾ. ನಿರಂಜನಮೂರ್ತಿ ಅವರು ಮಾರ್ಗದರ್ಶನ ನೀಡಿದ್ದರು.