ಸುAಟಿಕೊಪ್ಪ, ಡಿ. ೩೦: ಚಾಲಕನ ನಿಯಂತ್ರಣ ತಪ್ಪಿ ನಡೆದ ಅಪಘಾತದಲ್ಲಿ ೪ ವಾಹನಗಳು ಜಖಂಗೊAಡಿರುವ ಘಟನೆ ವರದಿಯಾಗಿದೆ.

ತಾ. ೨೯ ರ ರಾತ್ರಿ ೧೨.೩೦ ಸುಮಾರಿಗೆ ಮೈಸೂರು ಕಡೆಯಿಂದ ಮಂಗಳೂರು ಕಡೆಗೆ ಮೀನು ವಿತರಿಸಿ ತೆರಳುತ್ತಿದ್ದ ಪಿಕಪ್ (ಕೆಎ ೧೯ಎಡಿ ೧೬೫೦) ವಾಹನ ಹಾಗೂ (ಕೆಎ೧೯ಎಡಿ೨೦೯೩) ರ ೪೦೭ ವಾಹನಗಳು ಓವರ್ ಟೇಕ್ ಮಾಡುವ ಭರದಲ್ಲಿ ಸುಂಟಿಕೊಪ್ಪ ರಾಷ್ಟಿçÃಯ ಹೆದ್ದಾರಿ ಬಳಿ ಕೆ.ಪಿ. ಜಗನ್ನಾಥ್ ಎಂಬವರ ಮಾರುತಿ ಅಲ್ಟೊ ೮೦೦ (ಕೆಎ೧೨-ಜೆಡ್ ೨೫೩೫) ಕಾರಿಗೆ ಹಿಂಬದಿಯಿAದ ಪಿಕ್‌ಆಪ್ ಡಿಕ್ಕಿ ಯಾಗಿದೆ. ಇದರಿಂದ ಕಾರು ನುಜ್ಜು ಗುಜ್ಜಾಗಿದ್ದು, ಕಾವೇರಿ ಹಾಗೂ ಯಶೋಧ ಎಂಬವರ ಮನೆಯ ತಡೆಗೋಡೆಗೆ ಡಿಕ್ಕಿಯಾಗಿ ತಡೆಗೋಡೆ ಮುರಿದು ಬಿದ್ದಿದೆ. ಅಷ್ಟೇ ಅಲ್ಲದೆ, ಅನತಿ ದೂರದಲ್ಲಿ ನಿಂತಿದ್ದ ಮಾರುತಿ ಅಲ್ಟೊಗೆ (ಕೆಎ೦೪ ಎಂಎಫ್೨೭೯೧) ಡಿಕ್ಕಿಗೊಂಡ ಪರಿಣಾಮ ಮಾರುತಿ ಕಾರು ಹೆದ್ದಾರಿ ಬದಿಯಿಂದ ಬಲಭಾಗದಲ್ಲಿ ನಿಂತಿದ್ದ (ಕೆಎಲ್ ೫೮ ಎಡಿ ೧೦೪೭) ಇಕೊ ವಾಹನಕ್ಕೆ ಡಿಕ್ಕಿಯಾಗಿ ನಾಲ್ಕೂ ವಾಹನಗಳು ಜಖಂಗೊAಡಿವೆೆ.

ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಪುನಿತ್ ಹಾಗೂ ಸಿಬ್ಬಂದಿ ಸ್ಥಳ ಪರಿಶೀಲಿಸಿ ಮೊಕದ್ದಮೆ ದಾಖಲಿಸಿದ್ದಾರೆ.