ಸೋಮವಾರಪೇಟೆ, ಡಿ. ೨೮: ಪಟ್ಟಣದ ಮುತ್ತಪ್ಪ ಮತ್ತು ಅಯ್ಯಪ್ಪ ದೇವಾಲಯದಲ್ಲಿ ಮಂಡಲ ಪೂಜೆ ನಡೆಯಿತು.

ಉಷಾಪೂಜೆ, ಗಣಪತಿ ಹೋಮ, ತುಪ್ಪದ ಅಭಿಷೇಕ, ಪ್ರಸಾದ ವಿನಿಯೋಗ ನಡೆಯಿತು. ನಂತರ ಮಂಡಲ ಪೂಜೆಯ ಅಂಗವಾಗಿ ಪಡಿ ಪೂಜೆಯನ್ನು ಪ್ರಧಾನ ಅರ್ಚಕ ಮಣಿಕಂಠನ್ ನಂಬೂದರಿ ಪೌರೋಹಿತ್ಯದಲ್ಲಿ, ಅರ್ಚಕರಾದ ಜಗದೀಶ್ ಉಡುಪ ಸಹಕಾರದಲ್ಲಿ ನಡೆಸಲಾಯಿತು. ನಂತರ ಅಯ್ಯಪ್ಪ ದೇವರಿಗೆ ಪುಷ್ಪಾಭಿಷೇಕವನ್ನು ವಿಶೇಷವಾಗಿ ಮಾಡಲಾಯಿತು.

ಈ ಸಂದರ್ಭ ಸಮಿತಿ ಅಧ್ಯಕ್ಷ ಎನ್.ಡಿ. ವಿನೋದ್, ಕಾರ್ಯದರ್ಶಿ ಪ್ರಸನ್ನ ಮತ್ತು ಪದಾಧಿಕಾರಿಗಳು ಇದ್ದರು.