ಚೆಟ್ಟಳ್ಳಿ, ಡಿ. ೨೮: ದಾರುಲ್ ಉಲೂಂ ಮದ್ರಸ ಕುಶಾಲನಗರ ಎಸ್.ಕೆ.ಎಸ್.ಬಿ.ವಿ. ಶಾಖಾ ವತಿಯಿಂದ ಪ್ರಾಂಶುಪಾಲ ತಮ್ಲೀಖ್ ದಾರಿಮಿ ಅಧ್ಯಕ್ಷತೆಯಲ್ಲಿ ಎಸ್.ಕೆ.ಎಸ್.ಬಿ.ವಿ. ಸ್ಥಾಪನಾ ದಿನ ಆಚರಿಸಲಾಯಿತು.

ಖತೀಬರಾದ ಸೂಫಿ ದಾರಿಮಿ ಅವರ ದುಆಃ ಮೂಲಕ ಚಾಲನೆಗೊಂಡ ಕಾರ್ಯಕ್ರಮದಲ್ಲಿ ಎಸ್.ಕೆ.ಎಸ್.ಬಿ.ವಿ. ವ್ಯವಸ್ಥಾಪಕ ಉನೈಸ್ ಫೈಝಿ ಸ್ಥಾಪಕ ದಿನದ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲರಾದ ಅಶ್ರಫ್ ಅಝ್ಹರಿ, ಹಂಝ ಮುಸ್ಲಿಯಾರ್, ನಫೀರ್ ಮೌಲವಿ, ಶಖೀರ್ ಫೈಝಿ, ಮುಷ್ತಾಕ್ ದಾರಿಮಿ, ಎಸ್.ಕೆ.ಎಸ್.ಬಿ.ವಿ. ಶಾಖಾಧ್ಯಕ್ಷರಾದ ಮೂನಿಸ್, ಕೋಶಾಧಿಕಾರಿ ಫಾಝಿಲ್, ಮೀಡಿಯಾ ನೇತಾರರಾದ ಝಾಹಿದ್ ಉಪಸ್ಥಿತರಿದ್ದರು. ಎಸ್.ಕೆ.ಎಸ್.ಬಿ.ವಿ. ಕನ್ವೀನರ್ ಇಬ್ರಾಹಿಂ ಬಾತಿಷಾ ಶಂಸಿ ಸ್ವಾಗತಿಸಿ, ಎಸ್.ಕೆ.ಎಸ್.ಬಿ.ವಿ. ಪ್ರಧಾನ ಕಾರ್ಯದರ್ಶಿ ರಾಫಿ ವಂದಿಸಿದರು.