ಸುಂಟಿಕೊಪ್ಪ, ಡಿ. ೨೭: ಇಲ್ಲಿನ ಶ್ರೀ ಪುರಂ ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ಮಂಡಲ ಪೂಜೆ ಕಾರ್ಯಕ್ರಮ ಸರಳ ರೀತಿಯಲ್ಲಿ ನಡೆಯಿತು. ಕೊರೊನಾ ಮಹಾಮಾರಿ ಹಿನ್ನೆಲೆ ಸುಂಟಿಕೊಪ್ಪ ನಗರದಲ್ಲಿ ವರ್ಷಂ ಪ್ರತಿ ನಡೆಯುವ ಅಯ್ಯಪ್ಪ ಸ್ವಾಮಿ ಮೆರವಣಿಗೆಯನ್ನು ರದ್ದು ಗೊಳಿಸಲಾಗಿತ್ತು. ದೇವಸ್ಥಾನದಲ್ಲಿ ಗಣಪತಿ ಹೋಮ, ಅಯ್ಯಪ್ಪ ಸ್ವಾಮಿಗೆ ಪಂಚಾಮೃತ ಅಭಿಷೇಕ ಮಧ್ಯಾಹ್ನ ೧೨ ಗಂಟೆಗೆ ಸಹಸ್ರ ನಾಮ ಲಕ್ಷಾರ್ಚನೆ, ಪಲ್ಲಪೂಜೆ, ೧೨.೪೫ಕ್ಕೆ ಮಹಾಮಂಗಳಾರತಿ ಪ್ರಸಾದ ವಿನಿಯೋಗದ ನಂತರ ನೆರೆದಿದ್ದ ಭಕ್ತರಿಗೆ ಅನ್ನದಾನ ಮಾಡಲಾಯಿತು. ಸಂಜೆ ದುರ್ಗಾ ಪೂಜೆ ನೆÀರವೇರಿತು. ಪೂಜಾ ಕೈಂಕರ್ಯವನ್ನು ಅರ್ಚಕರಾದ ಗಣೇಶ್ ಉಪಾಧ್ಯಾಯ, ಮಂಜುನಾಥ ಭಟ್, ದರ್ಶನ್ ಭಟ್,ಮಹಾಬಲ ಭಟ್, ನೆರವೇರಿಸಿದರು.