ಕೂಡಿಗೆ, ಡಿ. 12: ಮುಳ್ಳುಸೋಗೆ ಗ್ರಾ.ಪಂ. ವ್ಯಾಪ್ತಿಯ ಬಸವೇಶ್ವರ ಬಡಾವಣೆಯಲ್ಲಿ ಕಳೆದ ಐದು ವರ್ಷಗಳಿಂದ ಈ ಭಾಗಕ್ಕೆ ಹಿಂದಿನ ಗ್ರಾಮ ಪಂಚಾಯಿತಿ ಸದಸ್ಯರು ಯಾವುದೇ ಕಾಮಗಾರಿಯನ್ನು ನಿರ್ವಹಿಸದೆ ಇದುವರೆಗೂ ರಸ್ತೆ ಮತ್ತು ಇತರ ಸೌಕರ್ಯಗಳನ್ನು ಒದಗಿಸದೆ ಇರುವುದರಿಂದ 4 ಮತ್ತು 5ನೇ ವಾರ್ಡ್ ನಿವಾಸಿಗಳು ಈ ಬಾರಿಯ ಗ್ರಾ.ಪಂ. ಚುನಾವಣೆಯನ್ನು ಬಹಿಷ್ಕರಿ ಸುವುದಾಗಿ ಸಭೆ ಸೇರಿ ತೀರ್ಮಾನ ಕೈಗೊಂಡಿದ್ದಾರೆ. 4 ಮತ್ತು 5ನೇ ವಾರ್ಡ್ ನಿವಾಸಿಗಳು ಮುಳ್ಳುಸೋಗೆ ಬಸವೇಶ್ವರ ದೇವಾಲಯದ ಆವರಣದಲ್ಲಿ ಬಯಲು ಬಸವೇಶ್ವರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಸಂದೀಪ್‍ಕುಮಾರ್ ಅಧ್ಯಕ್ಷತೆಯಲ್ಲಿ ಸಭೆ ಸೇರಿದ ವಾರ್ಡ್ ನಿವಾಸಿಗಳು ತೀರ್ಮಾನ ತೆಗೆದು ಕೊಂಡಿರುತ್ತಾರೆ. ಈ ಸಂದರ್ಭ ಕಾರ್ಯದರ್ಶಿ ರವಿ, ಸಮಿತಿಯ ನಿರ್ದೇಶಕರಾದ ಮಾಣಪ್ಪ, ಲಕ್ಷ್ಮಣ್, ರಮೇಶ್, ಕುಶಾಲಪ್ಪ, ಸುರೇಶ್, ಕಾಳಪ್ಪ, ಪೂಣಚ್ಚ ಸೇರಿದಂತೆ ಶೋಭ ಯಶೋಧ ಸೇರಿದಂತೆ ವಾರ್ಡ್‍ನ ಹಲವಾರು ನಾಗರಿಕರು ಭಾಗವಹಿಸಿದ್ದರು.